<p><strong>ಶಿವಮೊಗ್ಗ</strong>: ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚನೆ ಮಾಡಿದ್ದ ಮೂವರನ್ನು ಇಲ್ಲಿನ ಜಯನಗರ ಹಾಗೂ ಸಿಇಎನ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.</p>.<p>ಬೆಂಗಳೂರಿನ ಬನಶಂಕರಿಯ ನಿವಾಸಿ ಇಬ್ರಾಹಿಂ ಬಾದಷಾ ಅಲಿಯಾಸ್ ರಿಷಿಕ್ ಸ್ಯಾಮ್ (26), ಕುಮಾರಸ್ವಾಮಿ ಲೇಔಟ್ನ ಜನಾರ್ದನ (21) ಹಾಗೂ ಹನುಮಂತ (38) ಬಂಧಿತರು. ಆರೋಪಿಗಳಿಂದ ₹1500 ನಗದು ಹಣ ಹಾಗೂ ಮೊಬೈಲ್ ಪೊನ್ ವಶಪಡಿಸಿಕೊಳ್ಳಲಾಗಿದೆ.</p>.<p>ಶಿವಮೊಗ್ಗದ ಕೋಟೆ ಗಂಗೂರು ನಿವಾಸಿ ಪ್ರದೀಪ್ ಎಂಬುವವರಿಗೆ ಚಿಕ್ಕಮಗಳೂರು ಪೊಲೀಸರ ಹೆಸರಲ್ಲಿ ಕಳೆದ ಭಾನುವಾರ ಕರೆ ಮಾಡಿದ್ದ ಆರೋಪಿಗಳು, ಮಹಿಳೆಯೊಬ್ಬರಿಗೆ ನೀವು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದೀರಿ. ಆಕೆ ದೂರು ನೀಡಿದ್ದಾರೆ ಎಂದು ಹೇಳಿ ಹೆದರಿಸಿದ್ದರು. ನಂತರ ಫೋನ್ ಪೇ ಮುಖಾಂತರ ₹23 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ.</p>.<p>ಈ ಬಗ್ಗೆ ಪ್ರದೀಪ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಪೊಲೀಸರ ಹೆಸರಲ್ಲಿ ಯುವಕನಿಗೆ ವಂಚನೆ ಮಾಡಿದ್ದ ಮೂವರನ್ನು ಇಲ್ಲಿನ ಜಯನಗರ ಹಾಗೂ ಸಿಇಎನ್ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.</p>.<p>ಬೆಂಗಳೂರಿನ ಬನಶಂಕರಿಯ ನಿವಾಸಿ ಇಬ್ರಾಹಿಂ ಬಾದಷಾ ಅಲಿಯಾಸ್ ರಿಷಿಕ್ ಸ್ಯಾಮ್ (26), ಕುಮಾರಸ್ವಾಮಿ ಲೇಔಟ್ನ ಜನಾರ್ದನ (21) ಹಾಗೂ ಹನುಮಂತ (38) ಬಂಧಿತರು. ಆರೋಪಿಗಳಿಂದ ₹1500 ನಗದು ಹಣ ಹಾಗೂ ಮೊಬೈಲ್ ಪೊನ್ ವಶಪಡಿಸಿಕೊಳ್ಳಲಾಗಿದೆ.</p>.<p>ಶಿವಮೊಗ್ಗದ ಕೋಟೆ ಗಂಗೂರು ನಿವಾಸಿ ಪ್ರದೀಪ್ ಎಂಬುವವರಿಗೆ ಚಿಕ್ಕಮಗಳೂರು ಪೊಲೀಸರ ಹೆಸರಲ್ಲಿ ಕಳೆದ ಭಾನುವಾರ ಕರೆ ಮಾಡಿದ್ದ ಆರೋಪಿಗಳು, ಮಹಿಳೆಯೊಬ್ಬರಿಗೆ ನೀವು ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದೀರಿ. ಆಕೆ ದೂರು ನೀಡಿದ್ದಾರೆ ಎಂದು ಹೇಳಿ ಹೆದರಿಸಿದ್ದರು. ನಂತರ ಫೋನ್ ಪೇ ಮುಖಾಂತರ ₹23 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು ಎಂದು ತಿಳಿದುಬಂದಿದೆ.</p>.<p>ಈ ಬಗ್ಗೆ ಪ್ರದೀಪ್ ನೀಡಿದ ದೂರು ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>