ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಸಂಕಷ್ಟದಲ್ಲೂ ಗಣೇಶ ಹಬ್ಬದ ಸಂಭ್ರಮ

ನಗರದ ಹಲವೆಡೆ ಗಮನ ಸೆಳೆದ ನಾನಾ ಭಂಗಿಯ ಗಣಪತಿ ವಿಗ್ರಹಗಳು
Last Updated 1 ಸೆಪ್ಟೆಂಬರ್ 2019, 20:02 IST
ಅಕ್ಷರ ಗಾತ್ರ

ಶಿವಮೊಗ್ಗ: ಈಚೆಗೆ ಸುರಿದ ಆಶ್ಲೇಷ ಮಳೆಯ ತೀವ್ರತೆಯಿಂದನಲುಗಿರುವ ಜಿಲ್ಲೆಯ ಜನರು ಸಂಕಷ್ಟದಲ್ಲೂ ಗೌರಿ–ಗಣೇಶರನ್ನು ಸಂಭ್ರಮದಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ.

ಬಹುತೇಕ ಬಡಾವಣೆಗಳಲ್ಲಿ ಯುವಕರು ಉತ್ಸಾಹದಿಂದ ಗಣಪತಿ ಪ್ರತಿಷ್ಠಾಪನೆಗೆ ಪೆಂಡಾಲ್‌ಗಳನ್ನ ನಿರ್ಮಿಸಿ, ಕಣ್ಮನ ಸೆಳೆಯುವಂತೆ ಮಂಟಪಗಳಿಗೆ ದೀಪಾಲಂಕಾರ ಮಾಡಿದ್ದಾರೆ.

ನಗರದ ಸೈನ್ಸ್ ಮೈದಾನ, ಗೋಪಿ ವೃತ್ತ, ವಿನೋಬನಗರ ಪೊಲೀಸ್ ಚೌಕಿ, ಜೈಲು ವೃತ್ತ, ಲಕ್ಷ್ಮಿ ಚಿತ್ರಮಂದಿರ ವೃತ್ತ ಸೇರಿ ಹಲವೆಡೆಶಿವಲಿಂಗದ ಮೇಲೆ ಪ್ರತಿಷ್ಠಾಪಿಸಿದ ಗಣಪತಿ, ಕೃಷ್ಣನ ವೇಷದ ಗಣಪತಿ, ಕಾಳಿಂಗಮರ್ಧನ ಗಣಪತಿ, ಗೋವಿನ ಬಳಿ ಕುಳಿತಿರುವ ಗಣಪತಿ ಹೀಗೆ ನಾನಾ ಭಂಗಿಯ ಗಣಪತಿ ವಿಗ್ರಹಗಳು ಗಮನ ಸೆಳೆಯುತ್ತಿವೆ.

ಸಿದ್ಧಗೊಂಡಿದ್ದಮೂರ್ತಿಗಳು ನೀರು ಪಾಲು:ನಗರದಲ್ಲಿಗಣೇಶ ಹಬ್ಬಕ್ಕಾಗಿ ತಿಂಗಳಿಂದ ಸಿದ್ಧಗೊಂಡಿದ್ದಶೇ 80ರಷ್ಟು ಗಣೇಶ ಮೂರ್ತಿಗಳುತುಂಗಾ ಪ್ರವಾಹದಲ್ಲಿ ಕರಗಿ ಹೋಗಿ, ಹಬ್ಬದ ಉತ್ಸಾಹ ಸ್ವಲ್ಪ ಕಡಿಮೆಯಾಗಿದೆ. ಪ್ರವಾಹದ ಪರಿಣಾಮ ಗಣೇಶ ಮೂರ್ತಿಗಳ ತಯಾರಿಕಾ ಪ್ರದೇಶಕುಂಬಾರ ಗುಂಡಿಯನ್ನು ರಾತ್ರೋ ರಾತ್ರಿ ನೀರು ಆವರಿಸಿತ್ತು. ಜನರು ಜೀವ ಉಳಿಸಿಕೊಳ್ಳಲುಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದರು. ಸಿದ್ಧವಾಗಿದ್ದ ಗಣೇಶ ಮೂರ್ತಿಗಳು ನೀರಿನಲ್ಲಿ ಮುಳುಗಿಹೋಗಿದ್ದವು. ಮೂರ್ತಿಗಳು ಕರಗಿ ಹೋಗಿರುವ ಕಾರಣ ಹಲವು ಗಣಪತಿ ಮೂರ್ತಿ ತಯಾರಕರು ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ಮುಂಗಡವಾಗಿ ನೀಡಿದ್ದ ಹಣವನ್ನುವಾಪಸ್‌ ನೀಡಿದ್ದರು.

ಪ್ರಮುಖ ಸಂಘ–ಸಂಸ್ಥೆಗಳ ಗಣೇಶ ಮೂರ್ತಿಗಳನ್ನು ಒತ್ತಾಯದ ಮೇರೆಗೆ 2 ವಾರಗಳಲ್ಲೇ ಮೂರ್ತಿ ತಯಾರಕರು ಸಿದ್ಧಪಡಿಸಿದರು. ಆದರೂ ಮೂರ್ತಿ ತಯಾರಕರಿಗೆಸಿದ್ಧಪಡಿಸಿದ್ದ ಗಣೇಶನ ವಿಗ್ರಹಗಳು ಕರಗಿ ನಷ್ಟವಾಗಿರುವುದರಿಂದ ಅವರ ಮನೆಯಲ್ಲಿಹಬ್ಬದ ಕಳೆ ಕುಂದಿದೆ.

ಹಬ್ಬದ ಸಂಭ್ರಮ ಕಳೆದುಕೊಂಡ ಕಾರ್ಮಿಕರು:ಎರಡು ತಿಂಗಳಿನಿಂದ ಬೇಡಿಕೆ ಗಣನೀಯವಾಗಿ ಕುಸಿಯುತ್ತಿರುವ ಪರಿಣಾಮ ಶಿವಮೊಗ್ಗದ ಹಲವು ಕೈಗಾರಿಕಾ ಘಟಕಗಳು ಶೇ 60ರಷ್ಟು ಉತ್ಪಾದನೆ ಸ್ಥಗಿತಗೊಳಿಸಿದ್ದು,ಒಂದು ತಿಂಗಳ ಅವಧಿಯಲ್ಲಿ ಶೇ 50ರಷ್ಟು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿಕಾರ್ಮಿಕರಿಗೆ ಈ ಹಬ್ಬ ಸಂಭ್ರಮ ನೀಡಿಲ್ಲ.

ಇದೆಲ್ಲರ ಮಧ್ಯೆಯೂ ಗಣಪತಿ ಹಬ್ಬವನ್ನು ಜೋರಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಸರಳವಾಗಿಯಾದರೂಆಚರಿಸಲು ಜನರು ಮುಂದಾಗಿದ್ದಾರೆ. ಬೇರೆ ಬೇರೆ ಊರುಗಳಿಂದ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ತಂದಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿತ್ತು.ಪ್ರಮುಖ ವೃತ್ತಗಳಲ್ಲಿ ಬಾಳೆಕಂದು, ಮಾವಿನ ಸೊಪ್ಪು ಮಾರಾಟವಾಗುತ್ತಿದ್ದು, ಜನರು ಖರೀದಿಯಲ್ಲಿ ತೊಡಗಿದ್ದರು. ತರಕಾರಿ, ಹಣ್ಣು, ಹೂವುಗಳ ಬೆಲೆಯಲ್ಲಿ ಏರಿಕೆ ಕಂಡಿದ್ದು,ಮೋಸಂಬಿ ಕೆ.ಜಿ.ಗೆ ₹ 60ರಿಂದ ₹ 80, ಸೀತಾಫಲ ₹ 100, ಸೇಬು ₹100ರಿಂದ ₹150, ಮರಸೇಬು ₹80, ಬಾಳೆಹಣ್ಣು ₹80, ಹೂವು ಮಾರಿಗೆ ₹60ರಿಂದ ₹ 80ಕ್ಕೆ, ಸೇವಂತಿಗೆಕೆ.ಜಿಗೆ ₹ 200ಕ್ಕೆ ಮಾರಾಟವಾದವು.

ದೂರದ ಊರುಗಳಲ್ಲಿ ನೆಲೆಸಿರುವ ಸ್ಥಳೀಯರು ಈಗಾಗಲೇ ಹಬ್ಬಕ್ಕೆಂದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲು, ಕೆಎಸ್ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಅಗತ್ಯ ಕ್ರಮ
ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT