ಹೊಳೆಹೊನ್ನೂರು: ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯಿತು.
ಈ ಸಂದರ್ಭದಲ್ಲಿ ಭಾಗಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ ಇಂತಹ ಧಾರ್ಮಿಕ ಕಾರ್ಯಕ್ರಮ ನಡೆಯಬೇಕು’ ಎಂದರು.
‘ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಕನಸು ಹೊಂದಿದ್ದು, ಎಲ್ಲಾ ವರ್ಗದ ಜನರ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತೇನೆ. ಎಲ್ಲರೂ ಒಗ್ಗೂಡಿ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಮತಯಾಚನೆಗೆ ಮತ್ತೊಮ್ಮೆ ಗ್ರಾಮದಲ್ಲಿ ಬರುತ್ತೇನೆ’ ಎಂದರು.
ಸ್ಥಳೀಯ ಮುಖಂಡರಾದ ಎಚ್.ಎಸ್.ವಸಂತಕುಮಾರ್, ಪಿ.ಶಂಕರ್, ಎಚ್.ಜಿ.ವೆಂಕಟೇಶ್, ಎಂ.ಹರೀಶ್ಕುಮಾರ್, ಡಿ.ಬಿ.ಹಳ್ಳಿ ಬಸವರಾಜ್, ಕೊಟ್ರೇಶ್, ಚಂದ್ರು, ಮಂಜುನಾಥ್, ಶಿವಕುಮಾರ್, ಧಶರಥ, ಮಂಜಮ್ಮ ದೇವಸ್ಥಾನ ಸಮಿತಿ ಯಜಮಾನರು ಹಾಗೂ ಭಕ್ತರು ಹಾಜರಿದ್ದರು.