ಶಂಕರ್ ವೃತ್ತಿಯಲ್ಲಿ ಇಟ್ಟಿಗೆ ವ್ಯಾಪಾರಿ. ಹೊಡೆದಾಟ ಪ್ರಕರಣದಲ್ಲಿ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಂದಿದ್ದರು. ವಕೀಲ ನಯಾಜ್ ಪಾಟಿಸವಾಲಿಗೆ ಒಳಪಡಿಸುತ್ತಿದ್ದ ಸಮಯದಲ್ಲಿ ಕೆಲವು ಪ್ರಶ್ನೆಗಳಿಗೆ ಆಕ್ರೊಶಗೊಂಡು ಅನುಚಿತ ಪದ ಬಳಸಿದ್ದಾರೆ. ನ್ಯಾಯಾಲಯ ಕಾರ್ಯಕಲಾಪಕ್ಕೆ ಅಡ್ಡಿ, ಅನುಚಿತ ವರ್ತನೆ ಆರೋಪದ ಮೇಲೆ ನ್ಯಾಯಾಧೀಶರಾದ ಜ್ಯೋತಿ ಪಾಟೀಲ್ ಶಿಕ್ಷೆ ವಿಧಿಸಿದ್ದಾರೆ.