ಶಿವಮೊಗ್ಗ: ನಾಡು ಕಂಡ ಶ್ರೇಷ್ಠ ಶಿಲ್ಪಿ, ಕಲೆ ಹಾಗೂ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಶಿಲ್ಪ ಕಲೆಯ ಮಹತ್ವವನ್ನು ಸಾರಿದವರು ಅಮರಶಿಲ್ಪಿ ಜಕಣಾಚಾರಿ ಅವರು ಸಮಾಜಕ್ಕೆ ಮಾದರಿ ಆಗಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಹೊನ್ನಾಳಿ ತಿಳಿಸಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ವಿಶ್ವ ಕರ್ಮ ಮಹಾಸಭಾದಿಂದ ಭಾನುವಾರ ಆಯೋಜಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇಲೂರು ಹಳೆಬೀಡು ದೇವಾಲಯಗಳನ್ನು ಜಗತ್ತಿನ ಮೂಲೆ ಮೂಲೆಯಿಂದ ಜನರು ಬಂದು ಕಣ್ತುಂಬಿಕೊಳ್ಳುತ್ತಾರೆ. ಇದೇ ರೀತಿ ಅನೇಕ ದೇವಾಲಯಗಳು ಜಕಣಾಚಾರಿ ಅವರ ಹೆಸರನ್ನು ಹೇಳುತ್ತವೆ ಎಂದರು.
ಜಕಣಾಚಾರಿ ಅವರಲ್ಲಿ ಪ್ರಾಮಾಣಿಕತೆ ಇತ್ತು. ಪ್ರತಿಯೊಬ್ಬರೂ ಅವರಂತೆ ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಉಪನ್ಯಾಸಕ ಜಿ.ಡಿ. ಇಳಿಯರಾಜ್ ಇಟ್ಟಗಿ, ಕಲ್ಪನಾ ರಮೇಶ್, ನಿರಂಜನ್ ಮೂರ್ತಿ, ಸೋಮಚಾರ್, ಶ್ರೀನಿವಾಸ ಮೂರ್ತಿ, ರಮೇಶ್ ಇದ್ದರು.