ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ಪುನರ್‌ ಪರಿಶೀಲನೆಗೆ ಆಗ್ರಹ

ಭತ್ತ ಖರೀದಿ ಹಗರಣ ಸಿಐಡಿಗೆ ವಹಿಸಿ: ಕೆ.ಟಿ.ಗಂಗಾಧರ್
Last Updated 2 ಜೂನ್ 2020, 14:03 IST
ಅಕ್ಷರ ಗಾತ್ರ

ಶಿವಮೊಗ್ಗ: ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಳನ್ನು ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಏರಿಕೆ ಮಾಡಿದೆ.ಈ ಬೆಲೆಗಳನ್ನುಪುನರ್‌ಪರಿಶೀಲನೆ ಮಾಡಬೇಕು ಎಂದು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ಒತ್ತಾಯಿಸಿದರು.

2020-21ರ ಬಜೆಟ್‌ನಲ್ಲಿರೈತರ ಆದಾಯವನ್ನು ಒಂದೂವರೆ ಪಟ್ಟು ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಈಗ ಘೋಷಿಸಿರುವ ಬೆಂಬಲ ಬೆಲೆಗಳಲ್ಲಿ ಕೆಲವು ಉತ್ಪಾದನಾ ವೆಚ್ಚಕ್ಕೆಸಮವಾಗಿವೆ.ಉಳಿದ ಉತ್ಪನ್ನಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇವೆ.ಅವೈಜ್ಞಾನಿಕ ಬೆಲೆಗಳನ್ನು ಸರಿಪಡಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಈಗ ಘೋಷಿಸಿರುವ ಬೆಂಬಲ ಪರಿಣಾಮ ಕನಿಷ್ಠ ಶೇ 50ರಷ್ಟು ಆದಾಯ ಸಿಗಲಿದೆ ಎಂದು ಕೇಂದ್ರ ಸರ್ಕಾರಹೇಳುತ್ತಿದೆ. ಆದರೂ, ರೈತರ ಆದಾಯ ಸುರಕ್ಷ ಗಮನದಲ್ಲಿಟ್ಟುಕೊಳ್ಳದೇ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.ಈ ದರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಭತ್ತದ ಬೆಂಬಲ ಬೆಲೆನೆಪದಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಸೇರಿಕೊಂಡು ಹಣ ಲೂಟಿಮಾಡಿದ್ದಾರೆ. ಭತ್ತ ಮಾರಾಟ ಮಾಡುವ ರೈತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಡಿಸೆಂಬರ್ 26ರಿಂದ ಜನವರಿ 1ರವರೆಗೆ ಅವಕಾಶ ನೀಡಲಾಗಿತ್ತು. ಭತ್ತ ಖರೀದಿಗೆ ದಿನವನ್ನು ಮಾರ್ಚ್‌ ಅಂತ್ಯಕ್ಕೆ ಮುಕ್ತಾಯ ಮಾಡಲಾಗಿದೆ. ರೈತರು ಭತ್ತ ಕೊಯ್ಲು ಆರಂಭಿಸುವುದೇ ಏಪ್ರಿಲ್‌ ನಂತರ. ಹಾಗಾದರೆ ಯಾರ ಹಿತಕ್ಕಾಗಿ ಬೆಂಬಲ ಬೆಲೆ ಅವಧಿ ನಿಗದಿ ಮಾಡಲಾಗಿತ್ತು? ಇದು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟು ಹಣ ಲೂಟಿ ಮಾಡುವ ತಂತ್ರ ಎಂದು ಆರೋಪಿಸಿದರು.

ಭದ್ರಾವತಿ ತಾಲ್ಲೂಕಿನಲ್ಲಿ ಒಬ್ಬ ರೈತನಿಂದಲೂ ಭತ್ತ ಖರೀದಿಸಿಲ್ಲ. ಶಿವಮೊಗ್ಗ ತಾಲ್ಲೂಕಿನಲ್ಲಿ ಒಬ್ಬ, ಸಾಗರ ತಾಲ್ಲೂಕಿನಲ್ಲಿ 46, ಸೊರಬ ತಾಲ್ಲೂಕಿನಲ್ಲಿ 26, ಶಿಕಾರಿಪುರ ತಾಲೂಕಿನಲ್ಲಿ 77, ಹೊಸನಗರ ತಾಲ್ಲೂಕಿನಲ್ಲಿ 294, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 115 ರೈತರು ಸೇರಿ765 ರೈತರಿಂದ ಭತ್ತ ಖರೀದಿ ಮಾಡಲಾಗಿದೆ. ₨3.84 ಕೋಟಿಆನ್‌ಲೈನ್‌ ಮೂಲಕರೈತರಿಗೆ ಸಂದಾಯ ಮಾಡಲಾಗಿದೆ ಎಂದು ಕೃಷಿ ಇಲಾಖೆಮಾಹಿತಿ ನೀಡಿದೆ. ಲಕ್ಷ ಹೆಕ್ಟೇರ್ ಭತ್ತ ಬೆಳೆಯುವಕೇವಲ765 ರೈತರಿಂದಭತ್ತ ಖರೀದಿಸಲಾಗಿದೆ. ಈ ಹಗರಣವನ್ನುಸರ್ಕಾರ ಸಿಐಡಿ ತನಿಖೆಗೆ ವಹಿಸಬೇಕು ಎಂದುಒತ್ತಾಯಿಸಿದರು.

ಖರೀದಿ ಕೇಂದ್ರಗಳಿಗೆ ಭತ್ತ ನೀಡಲು ಆನ್‌ಲೈನ್‌ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು. ಹಣ ಲೂಟಿಯಾಗಿರುವ ಪ್ರಕರಣ ಸಿಐಡಿ ತನಿಖೆಗೆ ಆದೇಶಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಹನುಮಂತಾಪುರ ಹಿರಿಯಣ್ಣಯ್ಯ, ಸಣ್ಣ ರಾಮಪ್ಪ, ಪಾಂಡುರಂಗಪ್ಪ, ಜಗದೀಶ್ ನಾಯಕ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT