ಹೊಸನಗರ: ಚಲಿಸುತ್ತಿರುವ ಬೈಕ್ ಮೇಲೆ ಚಿರತೆಯೊಂದು ಎಗರಿದ್ದು, ಕೂದಲೆಳೆ ಅಂತರದಲ್ಲಿ ಸವಾರ ಬಚಾವಾದ ಘಟನೆ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ನಗರ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ನಡೆದಿದೆ.
ನಗರ ನಿವಾಸಿ ಪುರೋಹಿತರಾದ ಸುಬ್ರಹ್ಮಣ್ಯ ನಾವುಡ ಹೊಸನಗರದಿಂದ ನಗರಕ್ಕೆ ಬೈಕ್ನಲ್ಲಿ ಬರುವಾಗ ಈ ಘಟನೆ ನಡೆದಿದೆ.
‘ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆ ಎಗರಿತು. ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಜಿಗಿದು ಘರ್ಜಿಸಿತು. ಏನು ಮಾಡಲು ತೋಚದೆ ಬೈಕ್ ಹಾರನ್ ಒತ್ತಿಕೊಂಡೇ ಕಿರುಚಲು ಶುರು ಮಾಡಿದೆ. ಆಗ ಚಿರತೆ ರಸ್ತೆಯ ಮತ್ತೊಂದು ಬದಿಗೆ ನೆಗೆದು ಮೆರೆಯಾಯಿತು’ ಎಂದು ಸುಬ್ರಹ್ಮಣ್ಯ ತಿಳಿಸಿದರು.
ಅರಣ್ಯ ಇಲಾಖೆಗೆ ಮಾಹಿತಿ: ಚಿರತೆ ಕಾಣಿಸಿಕೊಂಡ ಕುರಿತು ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.