ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರ: ಬೈಕ್ ಮೇಲೆ ಎಗರಿದ ಚಿರತೆ; ಸವಾರ ಪಾರು

Last Updated 13 ಜುಲೈ 2022, 3:09 IST
ಅಕ್ಷರ ಗಾತ್ರ

ಹೊಸನಗರ: ಚಲಿಸುತ್ತಿರುವ ಬೈಕ್ ಮೇಲೆ ಚಿರತೆಯೊಂದು ಎಗರಿದ್ದು, ಕೂದಲೆಳೆ ಅಂತರದಲ್ಲಿ ಸವಾರ ಬಚಾವಾದ ಘಟನೆ ರಾಣೇಬೆನ್ನೂರು ಬೈಂದೂರು ಹೆದ್ದಾರಿಯ ನಗರ ಸಮೀಪ ದರ್ಗಾ ಹೆರಗೊಡಿಗೆ ಬಳಿ ಶನಿವಾರ ನಡೆದಿದೆ.

ನಗರ ನಿವಾಸಿ ಪುರೋಹಿತರಾದ ಸುಬ್ರಹ್ಮಣ್ಯ ನಾವುಡ ಹೊಸನಗರದಿಂದ ನಗರಕ್ಕೆ ಬೈಕ್‌ನಲ್ಲಿ ಬರುವಾಗ ಈ ಘಟನೆ ನಡೆದಿದೆ.

‘ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆ ಎಗರಿತು. ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಜಿಗಿದು ಘರ್ಜಿಸಿತು. ಏನು ಮಾಡಲು ತೋಚದೆ ಬೈಕ್ ಹಾರನ್‌ ಒತ್ತಿಕೊಂಡೇ ಕಿರುಚಲು ಶುರು ಮಾಡಿದೆ. ಆಗ ಚಿರತೆ ರಸ್ತೆಯ ಮತ್ತೊಂದು ಬದಿಗೆ ನೆಗೆದು ಮೆರೆಯಾಯಿತು’ ಎಂದು ಸುಬ್ರಹ್ಮಣ್ಯ ತಿಳಿಸಿದರು.

ಅರಣ್ಯ ಇಲಾಖೆಗೆ ಮಾಹಿತಿ: ಚಿರತೆ ಕಾಣಿಸಿಕೊಂಡ ಕುರಿತು ಸ್ಥಳೀಯ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT