‘ಗಿರಿಗೆ ಹಾನಿಯಾಗುವ ಮೋಜುಮಸ್ತಿ, ಬೇರೆ ಪ್ರಕರಣಗಳು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಿ. ಆದರೆ ತಮ್ಮ ವ್ಯಾಪ್ತಿಗೆ ಬರದ ಪ್ರವಾಸಿ ಮಂದಿರಕ್ಕೆ ಬೀಗ ಹಾಕುವುದು ಸರಿಯಲ್ಲ. ಅಲ್ಲದೆ ಸರ್ವಜ್ಞ ಪೀಠ ಮತ್ತು ಗಣಪತಿ ಗುಹೆಗೆ ತೆರಳುವ ಮಾರ್ಗದಲ್ಲಿ ಬೇಲಿ ಹಾಕಿ ನಿರ್ಬಂಧ ಹಾಕಲಾಗುತ್ತದೆ. ಇದು ಸರಿಯಲ್ಲ’ ಎಂದು ಪ್ರಮುಖರಾದ ರಾಜೇಂದ್ರ ಶೆಟ್ಟಿ ಹೇಳಿದರು.