ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲ್, ಮಾದಾಪುರ, ಅಲುವಳ್ಳಿ ವಿರಕ್ತಮಠ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ, ಅಡ್ಡೇರಿ, ಗಾಮನಗದ್ದೆ, ಸಾರಗನ ಜಡ್ಡು, ಕೊಳವಂಕ ಹಾರೋಹಿತ್ತಲು ಗ್ರಾಮಗಳಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಫಸಲು ಕೈ ಸೇರುವ ಮುನ್ನ ಕಮರಿ ಹೋಗಿದೆ. ಹೀಗಾಗಿ ನೂರಾರು ಮಧ್ಯಮ ಹಾಗೂ ಕೆಳ ವರ್ಗದ ಜನರ ಬದುಕು ಅತಂತ್ರವಾಗಿದೆ.