‘ಮಲೆನಾಡಿನಲ್ಲಿ ಕಾಡು ಉಳಿದಿದ್ದರೆ ಅದಕ್ಕೆ ಕಾರಣ ರೈತರು ಹಾಗೂ ರೈತರ ಮಕ್ಕಳೇ ಹೊರತು ಅರಣ್ಯ ಇಲಾಖೆಯಲ್ಲ. ಶ್ರೀಗಂಧ, ಬೀಟೆ ಜಾತಿಯ ಮರಗಳನ್ನು ಅಥವಾ ಇತರ ಮರಗಳನ್ನು ಸ್ವಂತ ಲಾಭಕ್ಕಾಗಿ ಕಡಿದಿದ್ದರೆ ಅವರ ಮೇಲೆ ನೀವು ಕ್ರಮ ಕೈಗೊಳ್ಳಿ. ಆದರೆ, ಸಾರ್ವಜನಿಕ ಕೆಲಸಕ್ಕಾಗಿ ಮರ ಕಡಿದವರ ಮೇಲೆ ದೌರ್ಜನ್ಯ ಎಸಗಿ ಭಯೋತ್ಪಾದಕರಂತೆ ಚಿತ್ರಿಸುವುದು ಎಷ್ಟು ಸರಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.