<p><strong>ಶಿರಾಳಕೊಪ್ಪ:</strong> ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸುತ್ತಮುತ್ತಲು ಭೂಮಿ ಕಂಪಿಸಿದ ಅನುಭವವಾಗಿದೆ.</p>.<p>ಬೆಳಗ್ಗಿನ ಜಾವ 3.55 ರ ಸಮಯದಲ್ಲಿ ಎರಡು ಸಾರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.</p>.<p>ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆದರೇ, ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ. ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.</p>.<p>4.1 ರ ಪ್ರಮಾಣದಲ್ಲಿ ಭೂಮಿ ಹಂಪಿಸಿದೆ, ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ.</p>.<p>ಈ ಬಗ್ಗೆ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ಕಾವಲುಗಾರ ಚಂದ್ರು ಮಾತನಾಡಿ, ತಾವೂ ಇಬ್ಬರು ರಾತ್ರಿ ದೇವಸ್ಥಾನದ ಕಾವಲು ಕಾಯುತ್ತಿದ್ದೆವು, ಬೆಳಗ್ಗಿನ ಜಾವಇಡೀ ದೇವಸ್ಥಾನವೇ ಅಲುಗಾಡಿದ ಅನುಭವ ಆಯಿತು ಎಂದರು.</p>.<p>ನಿವಾಸಿ ಸುಧಾಕರ ಮಾತನಾಡಿ, ಕಂಪಿಸಿದ ಸದ್ದಿಗೆ ಭಯದಿಂದ ಎದ್ದು ಕುಳಿತುಕೊಂಡೆ ಎರಡು ಬಾರಿ ಈ ಅನುಭವಾಗಿದೆ ಎಂದರು.</p>.<p>ಶಿಕ್ಷಕ ಹಿರೇಜಂಬೂರು ರಮೇಶ್ ಪ್ರತಿಕ್ರಿಯಿಸಿ, ಮೊದಲ ಸಲ ಆದಾಗ ಜೋರಾದ ಕಂಪನವಿತ್ತು, ಎರಡನೇ ಬಾರಿ ಶಬ್ದ ಹೆಚ್ಚಾಗಿತ್ತು ಎಂದರು.<br />ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಾಗರಿಕರು ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.</p>.<p>'ಭೂ ಕಂಪನ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕಾರಿಪುರ ತಹಶೀಲ್ದಾರ್ ಅವರನ್ನು ಶಿರಾಳಕೊಪ್ಪಕ್ಕೆ ಕಳುಹಿಸಿದ್ದೇನೆ. ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೋಶಕ್ಕೂ ಮಾಹಿತಿ ಕೇಳಲಾಗಿದೆ' ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾಳಕೊಪ್ಪ:</strong> ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸುತ್ತಮುತ್ತಲು ಭೂಮಿ ಕಂಪಿಸಿದ ಅನುಭವವಾಗಿದೆ.</p>.<p>ಬೆಳಗ್ಗಿನ ಜಾವ 3.55 ರ ಸಮಯದಲ್ಲಿ ಎರಡು ಸಾರಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ.</p>.<p>ಮೊದಲ ಸಲ ಜೋರಾಗಿ ಭೂಮಿ ಕಂಪಿಸಿದ ಅನುಭವ ಆದರೇ, ಎರಡನೇ ಸಲ ಕಂಪಿಸಿದ ಪ್ರಮಾಣ ಕಡಿಮೆ ಎನ್ನಿಸಿದೆ. ಯಾವುದೇ, ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ.</p>.<p>4.1 ರ ಪ್ರಮಾಣದಲ್ಲಿ ಭೂಮಿ ಹಂಪಿಸಿದೆ, ಶಿರಾಳಕೊಪ್ಪ ಪಟ್ಟಣದ 3 ಕಿ.ಮೀ ಸುತ್ತಳತೆಯಲ್ಲಿ ಭೂಕಂಪನ ಕೇಂದ್ರಿತವಾಗಿದೆ ಎಂದೂ ಸಾಮಾಜಿಕ ಜಾಲತಾಣದಲ್ಲಿಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಭೂಗರ್ಭ ಶಾಸ್ತ್ರಜ್ಞರು ಸ್ಪಷ್ಟನೆ ನೀಡಬೇಕಾಗಿದೆ.</p>.<p>ಈ ಬಗ್ಗೆ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನದ ಕಾವಲುಗಾರ ಚಂದ್ರು ಮಾತನಾಡಿ, ತಾವೂ ಇಬ್ಬರು ರಾತ್ರಿ ದೇವಸ್ಥಾನದ ಕಾವಲು ಕಾಯುತ್ತಿದ್ದೆವು, ಬೆಳಗ್ಗಿನ ಜಾವಇಡೀ ದೇವಸ್ಥಾನವೇ ಅಲುಗಾಡಿದ ಅನುಭವ ಆಯಿತು ಎಂದರು.</p>.<p>ನಿವಾಸಿ ಸುಧಾಕರ ಮಾತನಾಡಿ, ಕಂಪಿಸಿದ ಸದ್ದಿಗೆ ಭಯದಿಂದ ಎದ್ದು ಕುಳಿತುಕೊಂಡೆ ಎರಡು ಬಾರಿ ಈ ಅನುಭವಾಗಿದೆ ಎಂದರು.</p>.<p>ಶಿಕ್ಷಕ ಹಿರೇಜಂಬೂರು ರಮೇಶ್ ಪ್ರತಿಕ್ರಿಯಿಸಿ, ಮೊದಲ ಸಲ ಆದಾಗ ಜೋರಾದ ಕಂಪನವಿತ್ತು, ಎರಡನೇ ಬಾರಿ ಶಬ್ದ ಹೆಚ್ಚಾಗಿತ್ತು ಎಂದರು.<br />ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನಾಗರಿಕರು ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ.</p>.<p>'ಭೂ ಕಂಪನ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶಿಕಾರಿಪುರ ತಹಶೀಲ್ದಾರ್ ಅವರನ್ನು ಶಿರಾಳಕೊಪ್ಪಕ್ಕೆ ಕಳುಹಿಸಿದ್ದೇನೆ. ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಉಸ್ತುವಾರಿ ಕೋಶಕ್ಕೂ ಮಾಹಿತಿ ಕೇಳಲಾಗಿದೆ' ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ 'ಪ್ರಜಾವಾಣಿ'ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>