ಶಿವಮೊಗ್ಗ: ಕೋವಿಡ್ನಿಂದ ಮೃತಪಟ್ಟ 14 ಹಿಂದುಗಳ ಶವಸಂಸ್ಕಾರ ನೆರವೇರಿಸುವ ಮೂಲಕ ಶಿವಮೊಗ್ಗದ ಮುಸ್ಲಿಂ ಯುವಕರು ಮಾನವೀಯತೆ ತೋರಿದ್ದಾರೆ.
ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಸಲೀಂ ಖಾನ್ ಮತ್ತು ಅವರ ತಂಡದ ಯುವಕರು ಜಾತಿ, ಧರ್ಮ ಮೀರಿ ಶವ ಸಂಸ್ಕಾರ ನೆರವೇರಿಸಿದ್ದಾರೆ. ಶಿವಮೊಗ್ಗ ಮಾತ್ರವಲ್ಲದೆ ಚನ್ನಗಿರಿ, ಹೊನ್ನಾಳಿ, ತರೀಕೆರೆ ಭಾಗಗಳಿಗೂ ತೆರಳಿ ಅವರ ಊರುಗಳಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿ ಬಂದಿದ್ದಾರೆ.
ಕೋವಿಡ್ನಿಂದ ಮೃತಪಟ್ಟ ಮುಸ್ಲಿಂ ಸಮುದಾಯದ 50ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
’ಮೊದಲ ಅಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಯಾರೂ ಬಾರದೆ ಇದ್ದಾಗ, ಜಿಲ್ಲಾಡಳಿತದ ಅನುಮತಿ ಪಡೆದು ನಾವೇ ಮುಂದೆ ನಿಂತು ಶವ ಸಂಸ್ಕಾರ ಕಾರ್ಯ ನಡೆಸಿದ್ದೆವು. ಎರಡನೇ ಅಲೆ ಆರಂಭವಾದ ನಂತರ ಇಲ್ಲಿಯವರೆಗೂ 64 ಶವಗಳ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ. ಮಾನವೀಯ ಕಾರ್ಯ ಮುಂದುವರಿಸಿದ್ದೇವೆ’ ಎನ್ನುತ್ತಾರೆ ಸಲೀಂ ಖಾನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.