<p><strong>ಸಾಗರ:</strong> ಫೋಟೋಗ್ರಫಿ ತಾಂತ್ರಿಕತೆಗಿಂತ ಹೆಚ್ಚು ಭಾವನೆಗಳಿಗೆ ಸಂಬಂಧಿಸಿದ ಕಲೆ ಆಗಿದೆ ಎಂದು ಹಿರಿಯ ಛಾಯಾಚಿತ್ರಗ್ರಾಹಕ ಗೌತಮ್ ರಮೇಶ್ ಹೇಳಿದರು.</p>.<p>ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಗುರುವಾರ ಸಾಗರ ಪೋಟೋಗ್ರಾಫಿಕ್ ಸೊಸೈಟಿ ಆಯೋಜಿಸಿರುವ ಛಾಯಾಚಿತ್ರಗ್ರಹಣ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಫೋಟೋಕ್ಲಿಕ್ಕಿಸಲು ತಾಂತ್ರಿಕತೆಯ ಅವಶ್ಯಕತೆ ಇರುವುದು ನಿಜ. ಆದರೆ, ಕೇವಲ ತಾಂತ್ರಿಕತೆಯಿಂದಲೆ ಉತ್ತಮ ಫೋಟೋ ಹೊರಬರುವುದಿಲ್ಲ. ತಾಂತ್ರಿಕತೆಯ ಜೊತೆಗೆ ಫೋಟೋ ತೆಗೆಯುವವರ ಭಾವನೆಗಳು ಸಮ್ಮಿಳಿತಗೊಂಡಾಗ ಮಾತ್ರ ಗುಣಮಟ್ಟದ ಚಿತ್ರ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.</p>.<p>ಬೆಲೆ ಬಾಳುವ ಕ್ಯಾಮೆರಾ ಕೈಯಲ್ಲಿದ್ದರೆ ಮಾತ್ರ ಒಳ್ಳೆಯ ಫೋಟೋ ತೆಗೆಯಬಹುದು ಎಂಬ ಭಾವನೆ ತಪ್ಪು. ನಮ್ಮಲ್ಲಿರುವ ಕ್ಯಾಮೆರಾದ ಶಕ್ತಿ, ಸಾಮರ್ಥ್ಯ ಹಾಗೂ ಮಿತಿಗಳ ಅರಿವು ನಮಗಿದ್ದರೆ ಉತ್ತಮ ಚಿತ್ರ ತೆಗೆಯಬಹುದು ಎಂದು ತಿಳಿಸಿದರು.</p>.<p>ಹವ್ಯಾಸಿ ಛಾಯಾಚಿತ್ರಗ್ರಾಹಕರಲ್ಲಿ ಕಲಾತ್ಮಕ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ನಡೆಸುತ್ತಿರುವ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸಿವೆ. 25 ವರ್ಷಗಳಲ್ಲಿ ಪೋಟೋಗ್ರಫಿ ಕ್ಷೇತ್ರಕ್ಕೆ ಈ ಸಂಸ್ಥೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷೆ ಪಾರ್ವತಿ ರವೀಂದ್ರ ಹೇಳಿದರು.</p>.<p>ರಂಗಕರ್ಮಿಗಳಾದ ಕೃಷ್ಣಮೂರ್ತಿ, ಪ್ರಭಾ ಕೃಷ್ಣಮೂರ್ತಿ, ಪುರುಷೋತ್ತಮ ತಲವಾಟ, ಕಾರ್ಯಾಗಾರದ ಸಂಘಟಕರಾದ ರಾಜಾರಾಮ್ ಕೆ.ಎಸ್. ಜಿ.ಆರ್.ಪಂಡಿತ್, ಚಂದ್ರಶೇಖರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಫೋಟೋಗ್ರಫಿ ತಾಂತ್ರಿಕತೆಗಿಂತ ಹೆಚ್ಚು ಭಾವನೆಗಳಿಗೆ ಸಂಬಂಧಿಸಿದ ಕಲೆ ಆಗಿದೆ ಎಂದು ಹಿರಿಯ ಛಾಯಾಚಿತ್ರಗ್ರಾಹಕ ಗೌತಮ್ ರಮೇಶ್ ಹೇಳಿದರು.</p>.<p>ಸಮೀಪದ ಹೆಗ್ಗೋಡಿನ ನೀನಾಸಂ ಸಭಾಂಗಣದಲ್ಲಿ ಗುರುವಾರ ಸಾಗರ ಪೋಟೋಗ್ರಾಫಿಕ್ ಸೊಸೈಟಿ ಆಯೋಜಿಸಿರುವ ಛಾಯಾಚಿತ್ರಗ್ರಹಣ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>ಫೋಟೋಕ್ಲಿಕ್ಕಿಸಲು ತಾಂತ್ರಿಕತೆಯ ಅವಶ್ಯಕತೆ ಇರುವುದು ನಿಜ. ಆದರೆ, ಕೇವಲ ತಾಂತ್ರಿಕತೆಯಿಂದಲೆ ಉತ್ತಮ ಫೋಟೋ ಹೊರಬರುವುದಿಲ್ಲ. ತಾಂತ್ರಿಕತೆಯ ಜೊತೆಗೆ ಫೋಟೋ ತೆಗೆಯುವವರ ಭಾವನೆಗಳು ಸಮ್ಮಿಳಿತಗೊಂಡಾಗ ಮಾತ್ರ ಗುಣಮಟ್ಟದ ಚಿತ್ರ ಮೂಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.</p>.<p>ಬೆಲೆ ಬಾಳುವ ಕ್ಯಾಮೆರಾ ಕೈಯಲ್ಲಿದ್ದರೆ ಮಾತ್ರ ಒಳ್ಳೆಯ ಫೋಟೋ ತೆಗೆಯಬಹುದು ಎಂಬ ಭಾವನೆ ತಪ್ಪು. ನಮ್ಮಲ್ಲಿರುವ ಕ್ಯಾಮೆರಾದ ಶಕ್ತಿ, ಸಾಮರ್ಥ್ಯ ಹಾಗೂ ಮಿತಿಗಳ ಅರಿವು ನಮಗಿದ್ದರೆ ಉತ್ತಮ ಚಿತ್ರ ತೆಗೆಯಬಹುದು ಎಂದು ತಿಳಿಸಿದರು.</p>.<p>ಹವ್ಯಾಸಿ ಛಾಯಾಚಿತ್ರಗ್ರಾಹಕರಲ್ಲಿ ಕಲಾತ್ಮಕ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಸಾಗರ ಫೋಟೋಗ್ರಾಫಿಕ್ ಸೊಸೈಟಿ ನಡೆಸುತ್ತಿರುವ ಕಾರ್ಯಾಗಾರಗಳು ಪ್ರಮುಖ ಪಾತ್ರ ವಹಿಸಿವೆ. 25 ವರ್ಷಗಳಲ್ಲಿ ಪೋಟೋಗ್ರಫಿ ಕ್ಷೇತ್ರಕ್ಕೆ ಈ ಸಂಸ್ಥೆ ನೀಡಿರುವ ಕೊಡುಗೆ ಮಹತ್ವದ್ದಾಗಿದೆ ಎಂದು ಕಾರ್ಯಾಗಾರವನ್ನು ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷೆ ಪಾರ್ವತಿ ರವೀಂದ್ರ ಹೇಳಿದರು.</p>.<p>ರಂಗಕರ್ಮಿಗಳಾದ ಕೃಷ್ಣಮೂರ್ತಿ, ಪ್ರಭಾ ಕೃಷ್ಣಮೂರ್ತಿ, ಪುರುಷೋತ್ತಮ ತಲವಾಟ, ಕಾರ್ಯಾಗಾರದ ಸಂಘಟಕರಾದ ರಾಜಾರಾಮ್ ಕೆ.ಎಸ್. ಜಿ.ಆರ್.ಪಂಡಿತ್, ಚಂದ್ರಶೇಖರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>