ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಅಂದರೆ ಅದಕ್ಕೊಬ್ಬರು ಅಧ್ಯಕ್ಷರು ಇರುತ್ತಾರೆ. ಸಮುದಾಯದ ಅಭಿವೃದ್ಧಿಗೆ ಬಜೆಟ್ನಲ್ಲಿ ಹಣ ಮೀಸಲಿಡಬಹುದು. ಕೋಶ ಅಂದರೆ ತಹಶೀಲ್ದಾರ್ ದರ್ಜೆ ಅಧಿಕಾರಿ ನೇತೃತ್ವ ವಹಿಸುತ್ತಾರೆ. ಬಜೆಟ್ನಲ್ಲಿ ಹಣ ಕೊಡುವಂತೆ ಇಲ್ಲ. ಬದಲಿಗೆ ಕಾರ್ಪಸ್ ಫಂಡ್ನಲ್ಲಿ ಬದುಕಬೇಕಿದೆ. ಇದು ನಮ್ಮ ವಿರುದ್ಧ (ಈಡಿಗ ಸಮುದಾಯ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ ಷಡ್ಯಂತ್ರ. ಈ ಬಗ್ಗೆ ಅವರೆದುರು ನಿಂತು ಮಾತಾಡುವ ಶಕ್ತಿ ಸಮುದಾಯವನ್ನು ಪ್ರತಿನಿಧಿಸುವ ಐವರು ಶಾಸಕರು, ಇಬ್ಬರು ಸಚಿವರಿಗೆ ಇಲ್ಲ ಎಂದು ಕಿಡಿಕಾರಿದರು.