ಶಿವಮೊಗ್ಗ: ವಿಶ್ವ ಹಿಂದೂ ಪರಿಷತ್, ಶಕ್ತಿ ದೇವತೆಗಳ ಸಮಾಗಮ ಸಮಿತಿ ಕೋಟೆಸೀತಾ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಡಿ.29ರಂದು 21ನೇ ವರ್ಷದ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮ ಹಮ್ಮಿಕೊಂಡಿವೆ.
ಪ್ರತಿವರ್ಷ ಎಳ್ಳಮವಾಸ್ಯೆ ದಿನ ಈ ಕಾರ್ಯಕ್ರಮ ನಡೆಯುತ್ತಿತ್ತು. ಸೂರ್ಯಗ್ರಹಣದ ನಿಮಿತ್ತ ಡಿ.29ರಂದು ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ಬಾಬುಜಾದವ್ಶನಿವಾರ ಪತ್ರಿಕಾಗೋಷ್ಠಿಯಲ್ಲಿಮಾಹಿತಿ ನೀಡಿದರು.
ಬೆಳಿಗ್ಗೆ 11ಕ್ಕೆನಗರದ 50 ದೇವತೆಗಳ ಸಮಾಗಮವಿದೆ. 12.30ಕ್ಕೆ ಸಮಾಗಮ ಪೂಜೆ ಮತ್ತು ಉದ್ಘಾಟನಾ ಸಮಾರಂಭ ನೆರವೇರಲಿದೆ.1.15ಕ್ಕೆ ಅನ್ನಪೂರ್ಣೇಶ್ವರಿ ಆರಾಧನಾ ಸಮಾರಂಭ,ಮಹಾಮಂಗಳಾರತಿ ನಡೆಯಲಿದೆ. ನಂತರ ಸುಮಾರು 6 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ ಎಂದು ವಿವರ ನೀಡಿದರು.
ಸಂಜೆ 4.30 ರಿಂದ 5.30ರವರೆಗೆ ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮ, 6ರಿಂದ ಮಡಲಕ್ಕಿ ಸಮರ್ಪಣೆ, 8ಕ್ಕೆ ಮಂಗಳಾತಿ 9ಕ್ಕೆ ಸಮಾಗಮವಾಗಿದ್ದ ಎಲ್ಲಾ ದೇವತೆಗಳು ಸ್ವಸ್ಥಾನಗಳಿಗೆ ಮರಳಲಿವೆ.ಒಂದೇ ಕಡೆ 50 ದೇವತೆಗಳ ಸಮಾಗಮ ಸಂಭ್ರಮ ಕಣ್ತುಂಬಿಕೊಂಡು ಸೇವೆ ಮಾಡುವಂತಹ ಅವಕಾಶ ನಗರದ ಜನತೆಗೆ ಒದಗಿದೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಡಿ.ಎಸ್.ಅರುಣ್, ಸುರೇಶ್ಕುಮಾರ್ ಬಾಳೆಗುಂಡಿ, ಎಚ್.ಕೆ.ದೀನಾದಯಾಳು, ಎಸ್.ಆರ್.ನಟರಾಜ್, ರಾಜೇಶ್ಗೌಡ, ಸತೀಶ್ ಮುಂಚೆಮನೆಇದ್ದರು.