ಕೃಷಿ ಕಾರ್ಮಿಕರ ಅಲಭ್ಯತೆ, ರಸಗೊಬ್ಬರಗಳ ಬೆಲೆ ಏರಿಕೆ, ಭತ್ತಕ್ಕೆ ಉತ್ತಮ ಧಾರಣೆ ಇಲ್ಲದಿರುವುದರಿಂದ ಬಹುತೇಕ ಭತ್ತದ ಗದ್ದೆಗಳು ಈಚೆಗೆ ಅಡಿಕೆ ತೋಟಗಳಾಗಿ ಮಾರ್ಪಡುತ್ತಿವೆ. ಕೊರೊನಾ ನಂತರದಲ್ಲಿ ನಗರಗಳಿಂದ ಹಳ್ಳಿಗಳತ್ತ ಮುಖ ಮಾಡಿರುವ ಬಹುತೇಕ ಯುವಕರು ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಶುಂಠಿಗಳತ್ತ ಚಿತ್ತ ಹರಿಸುತ್ತಿದ್ದಾರೆ.