ಸಾರಾ ಸಂಸ್ಥೆಯ ಪ್ರತಿನಿಧಿ ಧನುಷ್, ಸಹ್ಯಾದ್ರಿ ಸಂವಾದದ ಮೂಲಕ ಮಕ್ಕಳಲ್ಲಿ ಸಹ್ಯಾದ್ರಿಯ ಅರಿವು ಮೂಡಿಸಲಾಗುತ್ತಿದೆ. ಭೌಗೋಳಿಕ ವ್ಯಾಪ್ತಿ, ಕೃತಕ ರಾಸಾಯನಿಕಗಳ ಪರಿಣಾಮ, ಜೀವವೈವಿಧ್ಯಗಳು, ಭೂಮಿಯ ಜೀವಜಲ, ಪೂರ್ವಜರ ಪರಿಸರ ಪ್ರೀತಿ, ಅಣೆಕಟ್ಟುಗಳು, ಜೀವಜಲ, ಭೂವೈಜ್ಞಾನಿಕ ವ್ಯಾಪ್ತಿ, ಸಸ್ಯ ಸಂಪತ್ತು ಮತ್ತು ಹವಾಮಾನ, ಸೂಕ್ಷ್ಮ ಜೀವಗಳು, ಸಹ್ಯಾದ್ರಿಯ ಸಂಸ್ಕೃತಿ ಸೇರಿ ಸಹ್ಯಾದ್ರಿಯ ಮಹತ್ವ ಸಾರುವ ದೃಶ್ಯಗಳ ಪ್ರದರ್ಶನ ಮಾಡುವ ಮೂಲಕ ಮಕ್ಕಳ ಗಮನ ಸೆಳೆಯಲಾಗುತ್ತಿದೆ. ಪ್ರತಿ ಶಾಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಮಾಹಿತಿ ನೀಡಿದರು.