ಆಪ್ಸ್ಕೋಸ್ ಸಂಸ್ಥೆ ಹೊರತಂದಿರುವ ‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ನೆರವು ಸ್ಮರಿಸಿದ ಮಧು ಬಂಗಾರಪ್ಪ
ಬೇಳೂರು ಆಪ್ಸ್ಕೋಸ್ ಸಂಸ್ಥೆ ಎಂಬುದು ಮಲೆನಾಡಿನ ರೈತ ಕುಟುಂಬಗಳ ಪಾಲಿಗೆ ಆಪತ್ಭಾಂಧವ ಇದ್ದಂತೆ ಎಂಬ ಮಾತು ಸಮಾರಂಭದ ವೇದಿಕೆಯಲ್ಲಿ ಇದ್ದ ಹಲವು ಗಣ್ಯರಿಂದ ಕೇಳಿಬಂತು. ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಂಸ್ಥೆ ಅಡಿಕೆಗೆ ಮುಂಗಡವಾಗಿ ₹ 60 ಲಕ್ಷ ನೆರವು ನೀಡಿದ್ದನ್ನು ಸಚಿವ ಮಧು ಬಂಗಾರಪ್ಪ ಸ್ಮರಿಸಿದರು. ಪ್ರೌಢಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಸಂಸ್ಥೆ ₹ 4 ಸಾವಿರ ಸಹಾಯ ಮಾಡಿದ್ದನ್ನು ಶಾಸಕ ಬೇಳೂರು ನೆನಪಿಸಿಕೊಂಡರು. ಯು.ಮಹಾಬಲರಾವ್ ವಿರುದ್ಧದ ಮೊಕದ್ದಮೆ ವಾಪಸ್ಗೆ ಸಮ್ಮತಿ ಆಪ್ಸ್ಕೋಸ್ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಯು. ಮಹಾಬಲರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಈ ಭಾಗದ ಸಹಕಾರಿ ಮುಖಂಡರ ಒತ್ತಾಯಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಮ್ಮತಿ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ಮಹಾಬಲರಾವ್ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.