ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ವಿದೇಶಿ ಅಡಿಕೆ ಆಮದು, ಹೆಚ್ಚಿನ ತೆರಿಗೆ ವಿಧಿಸಿ: ಸಚಿವ ಕೆ.ಎನ್. ರಾಜಣ್ಣ

ಆಪ್ಸ್‌ಕೋಸ್ ಸಂಸ್ಥೆಯ ಸುವರ್ಣ ಮಹೋತ್ಸವ ಉದ್ಘಾಟಿಸಿದ ಸಚಿವ ರಾಜಣ್ಣ
Published : 6 ಆಗಸ್ಟ್ 2023, 16:08 IST
Last Updated : 6 ಆಗಸ್ಟ್ 2023, 16:08 IST
ಫಾಲೋ ಮಾಡಿ
Comments
ಆಪ್ಸ್‌ಕೋಸ್ ಸಂಸ್ಥೆ ಹೊರತಂದಿರುವ ‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ಆಪ್ಸ್‌ಕೋಸ್ ಸಂಸ್ಥೆ ಹೊರತಂದಿರುವ ‘ಚಿನ್ನದ ಹೆಜ್ಜೆ’ ಸುವರ್ಣ ಸಂಚಿಕೆಯನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು.
ನೆರವು ಸ್ಮರಿಸಿದ ಮಧು ಬಂಗಾರಪ್ಪ
ಬೇಳೂರು ಆಪ್ಸ್‌ಕೋಸ್ ಸಂಸ್ಥೆ ಎಂಬುದು ಮಲೆನಾಡಿನ ರೈತ ಕುಟುಂಬಗಳ ಪಾಲಿಗೆ ಆಪತ್ಭಾಂಧವ ಇದ್ದಂತೆ ಎಂಬ ಮಾತು ಸಮಾರಂಭದ ವೇದಿಕೆಯಲ್ಲಿ ಇದ್ದ ಹಲವು ಗಣ್ಯರಿಂದ ಕೇಳಿಬಂತು. ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಸಂಸ್ಥೆ ಅಡಿಕೆಗೆ ಮುಂಗಡವಾಗಿ ₹ 60 ಲಕ್ಷ ನೆರವು ನೀಡಿದ್ದನ್ನು ಸಚಿವ ಮಧು ಬಂಗಾರಪ್ಪ ಸ್ಮರಿಸಿದರು. ಪ್ರೌಢಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಸಂಸ್ಥೆ ₹ 4 ಸಾವಿರ ಸಹಾಯ ಮಾಡಿದ್ದನ್ನು ಶಾಸಕ ಬೇಳೂರು ನೆನಪಿಸಿಕೊಂಡರು. ಯು.ಮಹಾಬಲರಾವ್ ವಿರುದ್ಧದ ಮೊಕದ್ದಮೆ ವಾಪಸ್‌ಗೆ ಸಮ್ಮತಿ ಆಪ್ಸ್‌ಕೋಸ್ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಯು. ಮಹಾಬಲರಾವ್ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಈ ಭಾಗದ ಸಹಕಾರಿ ಮುಖಂಡರ ಒತ್ತಾಯಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಸಮ್ಮತಿ ನೀಡಿದರು. ಸಂಸ್ಥೆಯ ಬೆಳವಣಿಗೆಗೆ ಮಹಾಬಲರಾವ್ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT