<p><strong>ಶಿವಮೊಗ್ಗ:</strong>ಮಲ್ಲಿಕಾರ್ಜುನ ನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ನಿರ್ಮಿಸುತ್ತಿರುವ ಮೊದಲ ಮನೆಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ಶನಿವಾರಗುದ್ದಲಿ ಪೂಜೆ ನೆರವೇರಿಸಿದರು.</p>.<p>ಪಾಲಿಕೆ ವ್ಯಾಪ್ತಿಯ ನಾಲ್ಕನೇ ವಾರ್ಡಿನಲ್ಲಿ ಸುಮಾರು ಮೂರೂವರೆ ಚದರ ಅಡಿಯಲ್ಲಿ₹ 5 ಲಕ್ಷ ವೆಚ್ಚದಂತೆ 100 ಮನೆಗಳನ್ನು ಕಟ್ಟಲಾಗುತ್ತಿದೆ. ₹ 5 ಕೋಟಿ ಮೀಸಲಿಡಲಾಗಿದೆ.ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರ ₹ 1.20ಲಕ್ಷ,ರಾಜ್ಯ ಸರ್ಕಾರದಿಂದ₹ 2 ಲಕ್ಷ, ಸಾಲದ ಮುಖಾಂತರ ₹ 1.60 ಲಕ್ಷ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹ 73 ಸಾವಿರ ಸಂಗ್ರಹಿಸಲಾಗುವುದು ಎಂದರು.</p>.<p>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರ್ಕಾರ₹ 1.50ಲಕ್ಷ, ರಾಜ್ಯ ಸರ್ಕಾರದಿಂದ ₹ 2 ಲಕ್ಷ, ಸಾಲದ ರೂಪದಲ್ಲಿ ₹ 78 ಸಾವಿರ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹50 ಸಾವಿರ ಗಳಂತೆ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.</p>.<p>ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ, ಮುಖಂಡರಾದ ನಳಿನಾ, ಬಾಬು, ಮನೆ ನಿರ್ಮಾಣದ ಗುತ್ತಿಗೆದಾರರಾದ ವಿಜಯ್, ಭರತ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong>ಮಲ್ಲಿಕಾರ್ಜುನ ನಗರದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ನಿರ್ಮಿಸುತ್ತಿರುವ ಮೊದಲ ಮನೆಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ಶನಿವಾರಗುದ್ದಲಿ ಪೂಜೆ ನೆರವೇರಿಸಿದರು.</p>.<p>ಪಾಲಿಕೆ ವ್ಯಾಪ್ತಿಯ ನಾಲ್ಕನೇ ವಾರ್ಡಿನಲ್ಲಿ ಸುಮಾರು ಮೂರೂವರೆ ಚದರ ಅಡಿಯಲ್ಲಿ₹ 5 ಲಕ್ಷ ವೆಚ್ಚದಂತೆ 100 ಮನೆಗಳನ್ನು ಕಟ್ಟಲಾಗುತ್ತಿದೆ. ₹ 5 ಕೋಟಿ ಮೀಸಲಿಡಲಾಗಿದೆ.ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರ ₹ 1.20ಲಕ್ಷ,ರಾಜ್ಯ ಸರ್ಕಾರದಿಂದ₹ 2 ಲಕ್ಷ, ಸಾಲದ ಮುಖಾಂತರ ₹ 1.60 ಲಕ್ಷ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹ 73 ಸಾವಿರ ಸಂಗ್ರಹಿಸಲಾಗುವುದು ಎಂದರು.</p>.<p>ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರ್ಕಾರ₹ 1.50ಲಕ್ಷ, ರಾಜ್ಯ ಸರ್ಕಾರದಿಂದ ₹ 2 ಲಕ್ಷ, ಸಾಲದ ರೂಪದಲ್ಲಿ ₹ 78 ಸಾವಿರ ಕೊಡಲಾಗುವುದು ಹಾಗೂ ಫಲಾನುಭವಿಗಳಿಂದ ₹50 ಸಾವಿರ ಗಳಂತೆ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.</p>.<p>ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮಹಾದೇವ, ಮುಖಂಡರಾದ ನಳಿನಾ, ಬಾಬು, ಮನೆ ನಿರ್ಮಾಣದ ಗುತ್ತಿಗೆದಾರರಾದ ವಿಜಯ್, ಭರತ್ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>