‘ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿ 24 ಎಕರೆ ಜಮೀನಿಗೆ ₹10.54 ಕೋಟಿನಿಗದಿ ಮಾಡಿ, ಜಿಲ್ಲಾಧಿಕಾರಿ ಖಾತೆಗೆ ಜಮಾ ಕೂಡ ಮಾಡಿದೆ. ಆದರೆ ಇಲ್ಲಿಯವರೆಗೆ ಭೂಮಿ ಕಳೆದುಕೊಂಡ ನಮಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಪರಿಹಾರ ಸಿಗದ ಹೊರತು ನಾವು ಹೇಗೆ ವಿಮಾನ ನಿಲ್ದಾಣ ಉದ್ಘಾಟನೆಗೆ ಒಪ್ಪುತ್ತೇವೆ, ಆದ್ದರಿಂದ ಯಾವ ಕಾರಣವನ್ನೂ ಹೇಳದೆ ವಿಮಾನ ನಿಲ್ದಾಣದ ಉದ್ಘಾಟನೆಗೆ ಮೊದಲೇ ಉಪವಿಭಾಗಾಧಿಕಾರಿಗೆ ಪರಿಹಾರ ನೀಡುವಂತೆ ಆದೇಶ ನೀಡಬೇಕು’ ಎಂದು ಮನವಿಯಲ್ಲಿ ಕೋರಿದರು. ರೈತ ಮುಖಂಡರಾದ ಬಿ.ಟಿ. ರವಿಕುಮಾರ್, ಬಿ.ಆರ್. ನಾಗರಾಜ್, ಬಾಲಕೃಷ್ಣ, ರಾಜಪ್ಪ, ಶಿವಮ್ಮ, ಶಾಂತಮ್ಮ, ಚಂದ್ರಪ್ಪ ಹಾಗೂ ಮಲೆನಾಡು ರೈತ ಹೋರಾಟ ಸಮಿತಿಯ ಮುಖ್ಯಸ್ಥ ತೀ.ನ. ಶ್ರೀನಿವಾಸ್ ಇದ್ದರು.