ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ವಿಜೃಂಭಣೆಯ ಗಣಪತಿ ರಥೋತ್ಸವ

Last Updated 26 ಮಾರ್ಚ್ 2023, 7:57 IST
ಅಕ್ಷರ ಗಾತ್ರ

ಸಾಗರ: ಇತಿಹಾಸ ಪ್ರಸಿದ್ಧ ಮಹಾಗಣಪತಿ ಮಹಾಸ್ಯಂದನ ರಥೋತ್ಸವ ಶನಿವಾರ ಬೆಳಿಗ್ಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನ ಸಿಬ್ಬಂದಿ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದು ಪಲ್ಲಕ್ಕಿ ಮೂಲಕ ಸ್ವರ್ಣ ಗಣಪತಿ ಉತ್ಸವ ನಡೆಯಿತು. ನಂತರ ಶ್ರೀ ದೇವರ ರಥಾರೋಹಣ ನೆರವೇರಿತು. ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನಂತರ ಭಕ್ತರು ರಥವನ್ನು ಎಳೆಯುವ ಶಾಸ್ತ್ರ ನೆರವೇರಿಸಿದರು.

ಧಾರ್ಮಿಕ ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕರಾದ ಸಮರ್ಥ ಭಟ್, ಲಕ್ಷ್ಮಣ್ ಜೋಯ್ಸ್, ಸದಾಶಿವ ಜೋಯ್ಸ್, ಜಗದೀಶ್ ಭಟ್, ನವೀನ್ ಜೋಯ್ಸ್, ರಾಘವೇಂದ್ರ ಭಟ್, ಸುಧೀಂದ್ರ ಭಟ್, ರಮೇಶ್ ಭಟ್, ಗಜಾನನ ಭಟ್ ನೆರವೇರಿಸಿದರು.

ರಥೋತ್ಸವ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಸದಸ್ಯರಾದ ಗಣೇಶ ಪ್ರಸಾದ್, ಆರ್. ಶ್ರೀನಿವಾಸ್, ಬಿ.ಎಚ್. ಲಿಂಗರಾಜ್, ಕುಸುಮ ಸುಬ್ಬಣ್ಣ ಭಾವನಾ ಸಂತೋಷ್, ಪ್ರಮುಖರಾದ ಐ.ವಿ. ಹೆಗಡೆ, ಜೆ. ಭೀಮಣ್ಣ, ಈಶ್ವರ್ ಸೇರಿ ವಿವಿಧ ಸಮಿತಿಯ ಸಂಚಾಲಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT