ಉತ್ಪಾದನೆ ಆರಂಭ: ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಒಳಗಿರುವ ಎಂಎಸ್ಪಿಎಲ್ ಆಮ್ಲಜನಕ ಘಟಕ ಉತ್ಪಾದನೆ ಆರಂಭಿಸಿದ್ದು, ಇದರಿಂದ ಪ್ರತಿದಿನ ಸುಮಾರು 150 ಸಿಲಿಂಡರ್ ಆಮ್ಲಜನಕ ಸಿಗಲಿದೆ. ಮತ್ತಷ್ಟು ಉನ್ನತೀಕರಿಸಿದರೆ ಹೆಚ್ಚಿನ ಆಮ್ಲಜನಕ ಉತ್ಪಾದನೆ ಸಾಧ್ಯವಾಗಲಿದೆ. ಸುತ್ತಲ ಜಿಲ್ಲೆಗಳಿಗೆ ಪ್ರಯೋಜನ ದೊರಕುವಂತೆ ಮಾಡಲಾಗುವುದು ಎಂದು ಶೆಟ್ಟರ್ ಭರವಸೆ ನೀಡಿದರು.