ಜೊಯಿಡಾ: ತಾಲ್ಲೂಕಿನ ಕಮರಗಾಂವ ಗ್ರಾಮದಲ್ಲಿ ಕಡವೆಯನ್ನು ಬೇಟೆಯಾಡಿದ ಆರೋಪದಲ್ಲಿ ಮೂವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಕಮರಗಾಂವ ಗ್ರಾಮದ ತಾಂಬಡೋ ಪೊಂಡೋ ವೆಳೀಪ (65), ಸಾಂಗತೊ ಮಧು ವೆಳೀಪ (61) ಹಾಗೂ ತುಕಾರಾಮ ಗೋವಿಂದ ವೆಳೀಪ (25) ಬಂಧಿತರು. ಅವರಿಂದ ಕಡವೆ ಚರ್ಮವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನುಕಾರವಾರ ನ್ಯಾಯಾಲಯಕ್ಕೆಹಾಜರು ಪಡಿಸಲಾಗಿದೆ.
ಈ ಗ್ರಾಮವು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದಬಾರಗದ್ದಾ ಸಮೀಪವಿದೆ.ಅಣಶಿ ವಲಯ ಅರಣ್ಯಾಧಿಕಾರಿ ಈರೇಶ ಕಬ್ಬಿನ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಮಾಡಿದರು.