ವಚನ ಕಾರರು, ಕಾಯಕಯೋಗಿಯಾಗಿದ್ದ ಸಿದ್ಧರಾಮೇಶ್ವರ ಅವರ ವಚನಗಳು ಬದುಕಿನ ಕಣ್ಣನ್ನು ತೆರೆಸುವಂತಹದ್ದು. ದಾರ್ಶನಿಕರನ್ನು ಜಾತಿ ಜನಾಂಗಕ್ಕೆ ಸೀಮಿತ ಮಾಡದೆ, ಅವರ ಜಯಂತಿ ಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳು ವಂತೆ ಆಗಬೇಕು’ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಉಷಾ ಎನ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ತುಷಾರ್ ಬಿ. ಹೊಸೂರು, ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ತಾಲ್ಲೂಕು ಭೋವಿ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಲ್.ಚಂದ್ರಪ್ಪ, ನಗರಸಭೆ ಸದಸ್ಯರಾದ ಕೆ.ಸಿದ್ದಪ್ಪ, ನಂದಾ ಗೊಜನೂರು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ.ಅಚ್ಚುತ್, ವೃತ್ತ ನಿರೀಕ್ಷಕ ಬಿ.ಎಲ್.ಜನಾರ್ದನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮಪ್ಪ ಇನ್ನಿತರರು ಹಾಜರಿದ್ದರು. ಮೋಹನ್ ಪ್ರಾರ್ಥಿಸಿದರು. ಪಿ.ಲಿಂಗಪ್ಪ ಸ್ವಾಗತಿಸಿದರು. ಕಲ್ಲಪ್ಪ ಮೆಣಸಿನಾಳ್ ನಿರೂಪಿಸಿದರು.