<p><strong>ಶಿವಮೊಗ್ಗ</strong>: ಸಮಾಜದಲ್ಲಿ ಮನುಷ್ಯ ಪ್ರೀತಿ ಕಡಿಮೆಯಾಗುತ್ತಿರುವುದರಿಂದ ಹಲವು ರೀತಿಯ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಸಾಹಿತ್ಯದಿಂದ ಮಾತ್ರ ಮನುಷ್ಯ ಪ್ರೀತಿಯನ್ನು ಪುನರ್ವೃದ್ಧಿಸಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಪ್ರತಿಪಾದಿಸಿದರು.<br /> <br /> ನಗರದ ಕರ್ನಾಟಕದ ಸಂಘದಲ್ಲಿ ಗುರುವಾರ ಹಮ್ಮಿಕೊಂಡಿದ್ದ 83ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಒಳ್ಳೆಯ ಸಾಹಿತ್ಯದಲ್ಲಿ ಮನುಷ್ಯ ಪ್ರೀತಿ ಕಾಣಬಹುದಾಗಿದ್ದು, ಅದನ್ನು ಓದುವುದರ ಮೂಲಕ ಜಗತ್ತಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಜನರಿಗೆ ಸಾವಿನ ಬಗ್ಗೆ ಭೀತಿ ಆರಂಭವಾಗಿದೆ. ಇದರಿಂದ ಸಮಾಜದಲ್ಲಿ ಅಸ್ಥಿರತೆ ಸೃಷ್ಟಿಯಾಗಿದೆ. ಈ ಅಸ್ಥಿರತೆಯಿಂದಾಗಿ ಹಣ ಮಾಡುವ ದಾಹ ಆರಂಭವಾಗಿದೆ. ಎಲ್ಲರನ್ನೂ ಅನುಮಾನದಿಂದ ನೋಡುವ ಮನಸ್ಥಿತಿಗೆ ಸಮಾಜ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಸಾಹಿತ್ಯದ ಚಟುವಟಿಕೆಗಳು ಈಗಿನ ಯುವಜನರಲ್ಲಿ ಯಾವುದೇ ಕುತೂಹಲ ಮೂಡಿಸುತ್ತಿಲ್ಲ. ಜನಪ್ರಿಯತೆಯ ಸೆಳೆತ ಇರುವ ಕಡೆ ಯುವ ಜನಾಂಗ ಹೋಗುತ್ತಿದೆ. ಸಾಹಿತ್ಯ ಅಂತಹ ಸೆಳೆತಗಳನ್ನು ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಚರ್ಚೆಗಳಾಗಬೇಕು ಎಂದರು.<br /> <br /> ಲೇಖಕನಿಗೆ ಮಗುವಿನ ಮುಗ್ಧತೆ ಬೇಕು. ಹಿಂಸೆ, ಕೌರ್ಯ, ನೋವು, ಸಂಕಟ ಅನುಭವಿಸಿದರೆ ಮಾತ್ರ ಒಳ್ಳೆಯ ಸಾಹಿತ್ಯ ರಚನೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.<br /> <br /> ರಾಜಕಾರಣಿಗಳನ್ನು ಓಲೈಕೆ ಮಾಡುವ ಸಾಹಿತಿಗಳು ಇದ್ದು, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ, ಅವರ ಕೃತಿಗಳನ್ನು ಉದಾಹರಿಸುವ ಪದ್ಧತಿಯೇ ನಮ್ಮಲ್ಲಿ ಇಲ್ಲವಾಗಿದೆ ಎಂದು ವಿಷಾದಿಸಿದರು.<br /> <br /> ಸಮಾರಂಭದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು.<br /> <br /> ಅಧ್ಯಕ್ಷ ಎಸ್.ವಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ್ ಸ್ವಾಗತಿಸಿದರು. <br /> <br /> ತದನಂತರ ತುಮರಿಯ ಕಿನ್ನರ ಮೇಳದ ಸುಶೀಲಾ ಕೆಳಮನೆ ಅವರು ಸರಸ್ವತಿ ಬಾಯಿ ರಾಜವಾಡೆ ಅವರ ಆತ್ಮಕಥೆ ಆಧರಿಸಿದ ‘ಗಿರಿಬಾಲೆ’ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಸಮಾಜದಲ್ಲಿ ಮನುಷ್ಯ ಪ್ರೀತಿ ಕಡಿಮೆಯಾಗುತ್ತಿರುವುದರಿಂದ ಹಲವು ರೀತಿಯ ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ಸಾಹಿತ್ಯದಿಂದ ಮಾತ್ರ ಮನುಷ್ಯ ಪ್ರೀತಿಯನ್ನು ಪುನರ್ವೃದ್ಧಿಸಲು ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಗೋಪಾಲಕೃಷ್ಣ ಪೈ ಪ್ರತಿಪಾದಿಸಿದರು.<br /> <br /> ನಗರದ ಕರ್ನಾಟಕದ ಸಂಘದಲ್ಲಿ ಗುರುವಾರ ಹಮ್ಮಿಕೊಂಡಿದ್ದ 83ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಒಳ್ಳೆಯ ಸಾಹಿತ್ಯದಲ್ಲಿ ಮನುಷ್ಯ ಪ್ರೀತಿ ಕಾಣಬಹುದಾಗಿದ್ದು, ಅದನ್ನು ಓದುವುದರ ಮೂಲಕ ಜಗತ್ತಿಗೆ ಒಳ್ಳೆಯದನ್ನು ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.<br /> <br /> ಜನರಿಗೆ ಸಾವಿನ ಬಗ್ಗೆ ಭೀತಿ ಆರಂಭವಾಗಿದೆ. ಇದರಿಂದ ಸಮಾಜದಲ್ಲಿ ಅಸ್ಥಿರತೆ ಸೃಷ್ಟಿಯಾಗಿದೆ. ಈ ಅಸ್ಥಿರತೆಯಿಂದಾಗಿ ಹಣ ಮಾಡುವ ದಾಹ ಆರಂಭವಾಗಿದೆ. ಎಲ್ಲರನ್ನೂ ಅನುಮಾನದಿಂದ ನೋಡುವ ಮನಸ್ಥಿತಿಗೆ ಸಮಾಜ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಸಾಹಿತ್ಯದ ಚಟುವಟಿಕೆಗಳು ಈಗಿನ ಯುವಜನರಲ್ಲಿ ಯಾವುದೇ ಕುತೂಹಲ ಮೂಡಿಸುತ್ತಿಲ್ಲ. ಜನಪ್ರಿಯತೆಯ ಸೆಳೆತ ಇರುವ ಕಡೆ ಯುವ ಜನಾಂಗ ಹೋಗುತ್ತಿದೆ. ಸಾಹಿತ್ಯ ಅಂತಹ ಸೆಳೆತಗಳನ್ನು ಮಾಡುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಚರ್ಚೆಗಳಾಗಬೇಕು ಎಂದರು.<br /> <br /> ಲೇಖಕನಿಗೆ ಮಗುವಿನ ಮುಗ್ಧತೆ ಬೇಕು. ಹಿಂಸೆ, ಕೌರ್ಯ, ನೋವು, ಸಂಕಟ ಅನುಭವಿಸಿದರೆ ಮಾತ್ರ ಒಳ್ಳೆಯ ಸಾಹಿತ್ಯ ರಚನೆ ಆಗಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.<br /> <br /> ರಾಜಕಾರಣಿಗಳನ್ನು ಓಲೈಕೆ ಮಾಡುವ ಸಾಹಿತಿಗಳು ಇದ್ದು, ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ, ಅವರ ಕೃತಿಗಳನ್ನು ಉದಾಹರಿಸುವ ಪದ್ಧತಿಯೇ ನಮ್ಮಲ್ಲಿ ಇಲ್ಲವಾಗಿದೆ ಎಂದು ವಿಷಾದಿಸಿದರು.<br /> <br /> ಸಮಾರಂಭದಲ್ಲಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಾ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು.<br /> <br /> ಅಧ್ಯಕ್ಷ ಎಸ್.ವಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯೆ ಅಂಬಿಕಾ ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ್ ಸ್ವಾಗತಿಸಿದರು. <br /> <br /> ತದನಂತರ ತುಮರಿಯ ಕಿನ್ನರ ಮೇಳದ ಸುಶೀಲಾ ಕೆಳಮನೆ ಅವರು ಸರಸ್ವತಿ ಬಾಯಿ ರಾಜವಾಡೆ ಅವರ ಆತ್ಮಕಥೆ ಆಧರಿಸಿದ ‘ಗಿರಿಬಾಲೆ’ ಏಕವ್ಯಕ್ತಿ ನಾಟಕ ಪ್ರದರ್ಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>