ಸಿರಿಗೆರೆ: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನ.30ರಿಂದ ಡಿ.3ರವರೆಗೆ ನಡೆಯಲಿರುವ ಏಷ್ಯಾ ಶಾಂತಿ ಶೃಂಗ ಸಮ್ಮೇಳನದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಅಂತರರಾಷ್ಟ್ರೀಯ ಶಾಂತಿ ಪ್ರತಿಷ್ಠಾನದ ಆಹ್ವಾನದ ಮೇರೆಗೆ ಭಾಗವಹಿಸಲು ಅವರು ಗುರುವಾರ ಕಠ್ಮಂಡುವಿಗೆ ತೆರಳಿದ್ದಾರೆ.
ಸಮ್ಮೇಳನದಲ್ಲಿ ‘ನಮ್ಮ ಕಾಲದ ಪ್ರಚಲಿತ ಸವಾಲುಗಳು, ಅಭಿವೃದ್ಧಿ ಮತ್ತು ಸಾರ್ವಕಾಲಿಕ ಮೌಲ್ಯಗಳು’ ಕುರಿತು ವಿಷಯ ಮಂಡಿಸುವರು. ಭಾರತದಿಂದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೂಡ ಭಾಗವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಏಷ್ಯಾ ಖಂಡದ ವ್ಯಾಪ್ತಿಯಲ್ಲಿ ಶಾಂತಿ ಸಂವರ್ಧನೆಗೆ ಶ್ರಮಿಸುತ್ತಿರುವ ಧಾರ್ಮಿಕ, ರಾಜಕೀಯ ಮುಖಂಡರು, ಸಂಸದರು, ಸಚಿವರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ.