ವಿಜಯಪುರ: ಇಲ್ಲಿಯ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಆ.23 ರಿಂದ 25ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವ ಕಾರ್ಯಕ್ರಮಗಳು ಜರುಗಲಿವೆ.
ಆ.23ರಂದು ಬೆಳಿಗ್ಗೆ 8 ಗಂಟೆಗೆ ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಪುಷ್ಪಾರ್ಚನೆ, ಸಂಜೆ 7 ಗಂಟೆಗೆ ದಾಸವಾಣಿ ಕಾರ್ಯಕ್ರಮ, ರಾತ್ರಿ 11 ಗಂಟೆಗೆ ಶ್ರೀ ಬಾಲಕೃಷ್ಣನಿಗೆ ಕಲ್ಪೋಕ್ತ ಪೂಜೆ, ರಾತ್ರಿ 12.03 ಗಂಟೆಗೆ ಅಘ್ರ್ಯ ಪ್ರದಾನ ನಡೆಯಲಿದೆ.
ಆ.24 ರಂದು ಬೆಳಿಗ್ಗೆ 6 ಗಂಟೆಗೆ ಪೂಜೆ, ಷೋಡಷೋಪಚಾರ ಪೂಜೆ, ನಂತರ ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನೆ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ 1 ರಿಂದ 4 ಮತ್ತು 5 ರಿಂದ 9 ವರ್ಷದವರಿಗೆ ವೇಷಭೂಷಣ ಸ್ಪರ್ಧೆ (ರಾಧಾ, ಕೃಷ್ಣ ವೇಷ ಮಾತ್ರ) ಹಮ್ಮಿಕೊಳ್ಳಲಾಗಿದೆ.
ಆ.25 ರಂದು ಬೆಳಿಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, 10.30 ಗಂಟೆಗೆ ನೈವೇದ್ಯ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ಜರುಗಲಿವೆ.
ಸಂಜೆ 6 ಗಂಟೆಗೆ ಗೋಪಾಲ ಕಾವಲಿ, ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ರಂಗಪೂಜೆ, ಅಷ್ಟಾವಧಾನ, ಮಹಾ ಮಂಗಳಾರತಿ ಹಾಗೂ ಫಲ ಮಂತ್ರಾಕ್ಷತೆ ನಡೆಯಲಿವೆ.