ಕುಣಿಗಲ್: ತಾಲ್ಲೂಕಿನ ಬೇಗೂರು ಮತ್ತು ಹುಲಿಯೂರುದುರ್ಗದ ಕೆಂಪನಹಳ್ಳಿ ಗ್ರಾಮದ ತೋಟಗಳಲ್ಲಿ ಅಡಿಕೆ ಗೊನೆ ಕದ್ದು ಮಾರಾಟ ಮಾಡಿದ್ದ ಐದು ಮಂದಿ ಕಳ್ಳರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸರಕು ಸಾಗಣೆ ವಾಹನ, ₹6 ಸಾವಿರ ವಶಪಡಿಸಿಕೊಂಡಿದ್ದಾರೆ.
ಮಂಡ್ಯದ ರವಿ, ಅಭೀಷೇಕ, ಅಭಿಜಿತ್, ಮಂಜುನಾಥ್ ಮತ್ತು ಮನು ಬಂಧಿತರು.
ಆರೋಪಿಗಳು ಕಳೆದ ತಿಂಗಳು ₹2 ಲಕ್ಷ ಮೌಲ್ಯದ ಅಡಿಕೆ ಗೊನೆಗಳನ್ನು ಕಳವು ಮಾಡಿ, ಕೊಪ್ಪದಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.