ವಿನಾಕಾರಣ ಕಮಿಷನ್ ನೀಡಿರುವುದಾಗಿ ಅನೇಕರು ನೀಡುತ್ತಿರುವ ಹೇಳಿಕೆಗೆ ದಾಖಲೆ ನೀಡಬೇಕು. ಅದನ್ನು ಬಿಟ್ಟು ಮಾಧ್ಯಮಗಳಲ್ಲಿ ಮುಖ ತೋರಿಸುವ ಸಲುವಾಗಿ ಇಲ್ಲದ ಹೇಳಿಕೆ ನೀಡಬಾರದು. ಯಾರು ಯಾರಿಗೆ ಕೊಟ್ಟರು, ಯಾಕೆ ಕೊಟ್ಟರು, ಎಷ್ಟು ಕೊಟ್ಟರು ಎನ್ನುವುದನ್ನು ಬಹಿರಂಗಪಡಿಸಬೇಕು. ಹಾಗೆಯೆ ಕೊಡುವವರಿಗೆ ಕೋಟ್ಯಂತರ ರೂಪಾಯಿ ಹೇಗೆ ಬಂತು ಎಂಬ ಬಗ್ಗೆ ಕೂಡ ತನಿಖೆಯಾಗಬೇಕು ಎಂದರು.