ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಡಾ.ಜಿ.ಪರಮೇಶ್ವರ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಸಂದರ್ಭ, ಅನಿಲ್ ಕುಮಾರ್ ಬೆಂಬಲಿಗರು ಬಿಜೆಪಿಯ ಬಾವುಟ ಹಾಗೂ ಕಮಲದ ಶಾಲು ಧರಿಸಿ ಘೋಷಣೆ ಕೂಗುತ್ತಾ ಶಾಲೆಯ ಒಳಗೆ ಪ್ರವೇಶಿಸಿದರು. ಘೋಷಣೆ ಕೂಗಿದ್ದರಿಂದ ಆರಂಭವಾದ ಗಲಾಟೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿತು.ಮಧ್ಯ ಪ್ರವೇಶಿಸಿದ ಪೊಲೀಸರು ವಾತಾವರಣ ತಿಳಿಗೊಳಿಸಿದರು.