ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಬಾಂಬ್ ಸ್ಫೋಟ: ರಮೇಶ್ ಗೌಡ ಪಾರ್ಥಿವ ಶರೀರಕ್ಕೆ ಕಾತರಿಸಿದ ಕುಟುಂಬ

Last Updated 23 ಏಪ್ರಿಲ್ 2019, 11:34 IST
ಅಕ್ಷರ ಗಾತ್ರ

ತುಮಕೂರು: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ನಗರದ ಮದ್ಯದ ವ್ಯಾಪಾರಿ ರಮೇಶ್ ಗೌಡ ಅವರ ಮನೆಯಲ್ಲಿ ಮಂಗಳವಾರ ನೀರವ ಮೌನ ಆವರಿಸಿತ್ತು.

ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದರು. ಶಾಸಕ ಬಿ.ಜಿ.ಜ್ಯೋತಿ ಗಣೇಶ್ ಮಂಗಳವಾರವೂ ಮನೆಗೆ ಬಂದು ಕುಟುಂಬದಿಂದ ಮಾಹಿತಿ ಪಡೆದರು. ಸಾಂತ್ವನ ಹೇಳಿದ ಧೈರ್ಯ ತುಂಬಿದರು.

ರಮೇಶ್ ಗೌಡ ಅವರ ಪಾರ್ಥಿವ ಶರೀರ ಬರುವಿಕೆಯತ್ತ ಅವರ ಕುಟುಂಬ ಕಾಯುತ್ತಿದೆ. ತುಮಕೂರಿನ ಅವರ ಮನೆಯಲ್ಲಿ ಒಂದು ತಾಸು ಹಾಗೂ ಕುಣಿಗಲ್‌ನ ಅವರ ಮನೆಯಲ್ಲಿ ಒಂದು ತಾಸು ದರ್ಶನಕ್ಕಿಟ್ಟು ನಂತರ ನಾಗಮಂಗಲ ತಾಲ್ಲೂಕಿನ ಬೆಟ್ಟಕೋಟೆಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.

ರಮೇಶ್ ಗೌಡ ಅವರ ಪತ್ನಿ ಹಾಗೂ ಪುತ್ರಿಯ ರೋದನ ತೀವ್ರವಾಗಿತ್ತು. ಅವರನ್ನು ಸಂಬಂಧಿಕರು ಸಮಾಧಾನಪಡಿಸಿದರು. ಮನೆಯ ಬಳಿ ಬರುತ್ತಿದ್ದ ರಮೇಶ್ ಗೌಡ ಸ್ನೇಹಿತರು ಸಹ ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT