<p><strong>ತುಮಕೂರು:</strong> ಬ್ರಾಹ್ಮಣರು ಸ್ವಾವಲಂಬಿಗಳು. ಸಮಾಜವನ್ನು ಕಟ್ಟಿದವರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಸಮಾಜದ ಮುಖಂಡರಾದ ಎಚ್.ಜಿ.ಚಂದ್ರಶೇಖರ್ ನುಡಿದರು.</p>.<p>ನಗರದಲ್ಲಿ ನಡೆದ ವಿಪ್ರ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಸ್ವಾವಲಂಬನೆಗೆ ಸ್ವಯಂ ಸ್ಫೂರ್ತಿಗೆ ಸಂಕಲ್ಪಕ್ಕೆ ಹೆಸರಾದವರು ಬ್ರಾಹ್ಮಣರು ಎಂದರು.</p>.<p>ಭವನ ನಿರ್ಮಿಸಲು ನಿವೇಶನ ದಾನ ನೀಡಿದ ಲೆಕ್ಕ ಪರಿಶೋಧಕ ನರಸಿಂಹಮೂರ್ತಿ, ‘ತ್ರಿಮತಸ್ಥ ಬ್ರಾಹ್ಮಣರು ಒಂದಾಗಿ ಪ್ರಪಂಚಕ್ಕೆ ಮಾದರಿ ಆಗಬೇಕು. ನಾನು ಇಂದು ಸಂಪಾದಿಸಿದ ಹೆಸರು ಕೀರ್ತಿ ಎಲ್ಲವೂ ನನ್ನ ತಂದೆ ತಾಯಿಯರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.</p>.<p>ಉದ್ಯಮಿ ಡಿ.ಆರ್.ಸುಬ್ರಮಣ್ಯ ಎಂ.ಡಿ.ಪೀಟ್ವೆಲ್, ಬ್ರಾಹ್ಮಣರಿಗೆ ಧೀ ಶಕ್ತಿಯು ಪೂರ್ವಜರಿಂದ ಬಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟ್ ನಾರಾಯಣ, ಬ್ರಾಹ್ಮಣರು ಸಹಜವಾಗಿಯೇ ಸರಳ ಜೀವಿಗಳು. ಎಂದಿಗೂ ಆಡಂಬರದ ಜೀವನ ನಡೆಸಿದವರಲ್ಲ ಎಂದರು.</p>.<p>ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಆರ್.ನಾಗರಾಜ್ರಾವ್, ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಭವನ ನಿರ್ಮಿಸಲು ಸಹಾಯ ಮಾಡಿದ ಸಿ.ವಿ.ಕೇಶವಮೂರ್ತಿ, ಕೆ.ಹಿರಿಯಣ್ಣ, ಸಿ.ಎನ್.ರಮೇಶ್, ಇಂದುಮತಿ ಶ್ರೀನಿವಾಸ್, ಕೃಷ್ಣಮೂರ್ತಿ, ಭಾರದ್ವಾಜ್ ಅನಂತ್ರಾಮಯ್ಯ, ಡಾ.ಮುರಳೀಧರ್, ಸಿ.ಎ. ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.</p>.<p>ಶಾಸಕರಾದ ಜ್ಯೋತಿ ಗಣೇಶ್, ಟಿ.ಕೆ.ರಾಘವೇಂದ್ರ, ಕೆ.ನಾಗಭೂಷಣ್ ಹಾಗೂ ಜಯಸಿಂಹರಾವ್, ಪ್ರೊ.ಟಿ.ಎನ್. ಪ್ರಭಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು:</strong> ಬ್ರಾಹ್ಮಣರು ಸ್ವಾವಲಂಬಿಗಳು. ಸಮಾಜವನ್ನು ಕಟ್ಟಿದವರು. ಸಮಾಜಕ್ಕೆ ಅವರ ಕೊಡುಗೆ ಅಪಾರವಾದುದು ಎಂದು ಸಮಾಜದ ಮುಖಂಡರಾದ ಎಚ್.ಜಿ.ಚಂದ್ರಶೇಖರ್ ನುಡಿದರು.</p>.<p>ನಗರದಲ್ಲಿ ನಡೆದ ವಿಪ್ರ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಸ್ವಾವಲಂಬನೆಗೆ ಸ್ವಯಂ ಸ್ಫೂರ್ತಿಗೆ ಸಂಕಲ್ಪಕ್ಕೆ ಹೆಸರಾದವರು ಬ್ರಾಹ್ಮಣರು ಎಂದರು.</p>.<p>ಭವನ ನಿರ್ಮಿಸಲು ನಿವೇಶನ ದಾನ ನೀಡಿದ ಲೆಕ್ಕ ಪರಿಶೋಧಕ ನರಸಿಂಹಮೂರ್ತಿ, ‘ತ್ರಿಮತಸ್ಥ ಬ್ರಾಹ್ಮಣರು ಒಂದಾಗಿ ಪ್ರಪಂಚಕ್ಕೆ ಮಾದರಿ ಆಗಬೇಕು. ನಾನು ಇಂದು ಸಂಪಾದಿಸಿದ ಹೆಸರು ಕೀರ್ತಿ ಎಲ್ಲವೂ ನನ್ನ ತಂದೆ ತಾಯಿಯರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.</p>.<p>ಉದ್ಯಮಿ ಡಿ.ಆರ್.ಸುಬ್ರಮಣ್ಯ ಎಂ.ಡಿ.ಪೀಟ್ವೆಲ್, ಬ್ರಾಹ್ಮಣರಿಗೆ ಧೀ ಶಕ್ತಿಯು ಪೂರ್ವಜರಿಂದ ಬಂದಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.</p>.<p>ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೆಂಕಟ್ ನಾರಾಯಣ, ಬ್ರಾಹ್ಮಣರು ಸಹಜವಾಗಿಯೇ ಸರಳ ಜೀವಿಗಳು. ಎಂದಿಗೂ ಆಡಂಬರದ ಜೀವನ ನಡೆಸಿದವರಲ್ಲ ಎಂದರು.</p>.<p>ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎನ್.ಆರ್.ನಾಗರಾಜ್ರಾವ್, ಶಾಸಕ ಬಿ.ಸಿ.ನಾಗೇಶ್ ಮಾತನಾಡಿದರು. ಭವನ ನಿರ್ಮಿಸಲು ಸಹಾಯ ಮಾಡಿದ ಸಿ.ವಿ.ಕೇಶವಮೂರ್ತಿ, ಕೆ.ಹಿರಿಯಣ್ಣ, ಸಿ.ಎನ್.ರಮೇಶ್, ಇಂದುಮತಿ ಶ್ರೀನಿವಾಸ್, ಕೃಷ್ಣಮೂರ್ತಿ, ಭಾರದ್ವಾಜ್ ಅನಂತ್ರಾಮಯ್ಯ, ಡಾ.ಮುರಳೀಧರ್, ಸಿ.ಎ. ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.</p>.<p>ಶಾಸಕರಾದ ಜ್ಯೋತಿ ಗಣೇಶ್, ಟಿ.ಕೆ.ರಾಘವೇಂದ್ರ, ಕೆ.ನಾಗಭೂಷಣ್ ಹಾಗೂ ಜಯಸಿಂಹರಾವ್, ಪ್ರೊ.ಟಿ.ಎನ್. ಪ್ರಭಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>