ಮಧುಗಿರಿಹೊರವಲಯದ ಕೆಎಸ್ಆರ್ಟಿಸಿ ಬಸ್ ಡಿಪೊದಿಂದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದವರೆಗೂ ಕೆ–ಶಿಪ್ನಿಂದ ₹34 ಕೋಟಿ ವೆಚ್ಚದಲ್ಲಿ 7.2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ರೈತರು ಮೂರು ಕಡೆಗಳಲ್ಲಿ ದೊಡ್ಡ ಕಲ್ಲು ಹಾಗೂ ಮಣ್ಣು ಹಾಕಿರುವುದರಿಂದ ಪಾವಗಡ, ಹಿಂದೂಪುರ ಹಾಗೂ ಗೌರಿಬಿದನೂರು ಮಾರ್ಗಗಳಿಂದ ಬರುವ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.