ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು, ಚಿನ್ನಾಭರಣ ಕಳವು

ನಗರದ ಹೊರವಲಯದ ಸಂಜಯ್‌ನಗರದಲ್ಲಿ ಹಾಡಹಗಲೇ ನಡೆದ ಕಳವು
Last Updated 13 ಜೂನ್ 2019, 17:18 IST
ಅಕ್ಷರ ಗಾತ್ರ

ತುಮಕೂರು: ಹಾಡಹಗಲೇ ಮನೆ ಬಾಗಿಲು ಮುರಿದು ₹ 6.5 ಲಕ್ಷ ನಗದು, ₹ 8 ಲಕ್ಷ ಮೊತ್ತದ ಚಿನ್ನಾಭರಣ ಕಳವು ಮಾಡಲಾಗಿದೆ.

ನಗರದ ಹೊರವಲಯದ ಮೈದಾಳ ರಸ್ತೆಯ ಸಂಜಯನಗರದ ನೇತ್ರಾ ನಾಗಭೂಷಣ ಎಚ್.ಎಸ್. ಅವರ ಮನೆಯಲ್ಲಿ ಬುಧವಾರ ಈ ಕಳ್ಳತನ ನಡೆದಿದೆ.

ನೇತ್ರಾ ಮತ್ತು ಅವರ ಪತಿ ಕೆಲಸಕ್ಕೆ ಬೆಳಿಗ್ಗೆ 10 ಗಂಟೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಸಂಜೆ 5 ಗಂಟೆಗೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಕಳ್ಳರು ಕಬ್ಬಿಣದ ಗ್ರಿಲ್ ಗೇಟ್ ಗೇಟ್ ಮುರಿದು ಒಳ ಪ್ರವೇಶಿಸಿದ್ದಾರೆ. ಮನೆಯ ಹಿಂಬಾಗಿಲನ್ನು ಹಾರೆಕೋಲು, ಪಿಕಾಶಿಯಿಂದ ಮೀಟಿ ಬಾಗಿಲು ಒಡೆದು ಒಳಹೋಗಿ ಕಳವು ಮಾಡಿದ್ದಾರೆ ಎಂದು ಕ್ಯಾತ್ಸಂದ್ರ ಠಾಣೆ ಪೊಲೀಸರು ತಿಳಿಸಿದ್ದಾರೆ.

ನೇತ್ರಾ ಅವರ ಪತಿಯ ತಂಗಿ ಮದುವೆ ಖರ್ಚಿಗೆಂದು ಅಲ್ಮೇರಾದಲ್ಲಿ ಇಟ್ಟಿದ್ದ ₹ 6.5 ಲಕ್ಷ ಹಣ, ₹ 8 ಲಕ್ಷ ಮೊತ್ತದ ಚಿನ್ನಾಭರಣವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT