ರಾಜ್ಯ ಸರ್ಕಾರವು ಕೊರೊನಾ ವಾರಿಯರ್ಸ್ಗಳ ಬಗ್ಗೆ ತಳೆದಿರುವ ಅಸಡ್ಡೆ, ಅನಾದರಗಳನ್ನು ತೊಡೆದು ಕೂಡಲೇ ಅವರಿಗೆ ಸೂಕ್ತ ಸುರಕ್ಷೆ, ಯೋಗ್ಯ ವೇತನ, ಸೌಕರ್ಯ ಒದಗಿಸಬೇಕು. ಆರೋಗ್ಯ ವ್ಯವಸ್ಥೆಯನ್ನು ಸಮರ್ಪಕ ಸಿಬ್ಬಂದಿ ಹಾಗೂ ಕನಿಷ್ಠ ಸುರಕ್ಷಾ ಸಾಮಗ್ರಿ, ಅಗತ್ಯ ಪರಿಕರ ಸೌಕರ್ಯಗಳಿಂದ ಸುಧಾರಿಸಬೇಕು ಎಂದು ಸಂಘದ ಪರವಾಗಿ ಮಂಜುಳ ಗೋನವಾರ ಆಗ್ರಹಿಸಿದ್ದಾರೆ.