ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ವಿಧಾನಸೌಧ ಉದ್ಘಾಟನೆ ವಿರೋಧಿಸಿ ಪ್ರತಿಭಟನೆ

Last Updated 11 ಸೆಪ್ಟೆಂಬರ್ 2020, 3:13 IST
ಅಕ್ಷರ ಗಾತ್ರ

ಶಿರಾ: ಮೂಲ ಸೌಕರ್ಯ ಒದಗಿಸದೆ, ಕ್ಷೇತ್ರದಲ್ಲಿ ಶಾಸಕರಿಲ್ಲದ ಸಮಯದಲ್ಲಿ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಮನೆಯ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಕಾರ್ಯಕರ್ತರನ್ನು ಪ್ರವಾಸಿ ಮಂದಿರದ ವೃತ್ತದಲ್ಲಿ ಪೊಲೀಸರು ತಡೆದರು. ಅಲ್ಲಿಯೇ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಮೂಲ ಸೌಕರ್ಯವಿಲ್ಲದ ಕಟ್ಟಡ ಉದ್ಟಾಟಿಸಲಾಗುತ್ತಿದೆ. ಶಾಸಕರಿಲ್ಲದಾಗ ಕಟ್ಟಡ ಉದ್ಘಾಟಿಸುತ್ತಿದ್ದು ಶಿರಾ ತಾಲ್ಲೂಕಿನ ಜನರಿಗೆ ಅಪಮಾನ ಮಾಡಲಾಗುತ್ತಿದೆ. ಉದ್ಘಾಟನೆ ಮುಂಡೂದುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಮುಖಂಡರಾದ ಡಿ.ಸಿ.ಆಶೋಕ್, ಗುಳಿಗೇನಹಳ್ಳಿ ನಾಗರಾಜು, ಅರೇಹಳ್ಳಿ ರಮೇಶ್, ಎನ್.ಸಿ. ದೊಡ್ಡಯ್ಯ, ದಿವಾಕರ್ ಗೌಡ, ನೂರುದ್ದೀನ್, ಭಾನು ಪ್ರಕಾಶ್, ದೇವರಾಜು ಯಾದವ್, ಸತ್ಯನಾರಾಯಣ, ದಯಾನಂದ, ಷಣ್ಮುಖಪ್ಪ, ವಾಜರಹಳ್ಳಿ ರಮೇಶ್, ಬಾಲೇನಹಳ್ಳಿ ಪ್ರಕಾಶ್, ಎಚ್.ಎಲ್. ರಂಗನಾಥ್, ಪಿ.ಬಿ.ನರಸಿಂಹಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT