ತುಮಕೂರು ಮರಳೂರು ದಿಣ್ಣೆಯ 5 ಮಂದಿ, ತಿಪಟೂರಿನ ಒಬ್ಬ ವ್ಯಕ್ತಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ತಿಪಟೂರಿನ ವ್ಯಕ್ತಿ ಅಲ್ಲಿಂದ ದೆಹಲಿಗೆ ಹೋಗಿ, ವಿಶೇಷ ರೈಲಿನ ಮೂಲಕ ಮೇ 25ರಂದು ಬೆಳಿಗ್ಗೆ ಬೆಂಗಳೂರು ತಲುಪಿದ್ದರು. ಮೇ 26ರಂದು ಸರಕು ಸಾಗಣೆ ವಾಹನದ ಮೂಲಕ ತುಮಕೂರಿಗೆ ಬಂದಿದ್ದು, ರಾಜೀವ್ಗಾಂಧಿ ನಗರದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.