ಇದನ್ನು ಕಂಡು ಗಾಬರಿಗೊಂಡ ಎಂ.ಬಿ.ಪಾಳ್ಯದ ಗ್ರಾಮದ ಜನರು ಸ್ಥಳಕ್ಕೆ ಬಂದು ವೃದ್ಧೆ ವಯಸ್ಸಾಗಿದ್ದರಿಂದ ಸಹಜವಾಗಿ ಸಾವನ್ನಪ್ಪಿದ್ದಾರೆ. ಬೇಲಿ ತೆಗೆಯಿರಿ ಎಂದು ಹೇಳಿದಾಗ, ‘ನಿಮ್ಮ ಗ್ರಾಮದ ಕೆಲ ಯುವಕರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಈಗ ಗ್ರಾಮಕ್ಕೆ ವಾಪಸಾಗುತ್ತಿದ್ದಾರೆ ಮತ್ತು ಕೊರೊನಾ ವೈರಸ್ ಬಹುತೇಕ ವಿದೇಶಿಗಳಿಂದ ಬಂದಿರುವ ಜನರಲ್ಲೇ ಕಾಣಿಸಿರುವುದರಿಂದ ಏ. 14ರವರೆಗೆ ನಾವು ನಿಮ್ಮ ಗ್ರಾಮಗಳಿಗೆ ಮತ್ತು ನೀವು ನಮ್ಮ ಗ್ರಾಮಗಳಿಗೆ ಬರುವುದು ಬೇಡ’ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದಾರೆ.