ಮರಿಯಪ್ಪ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಎರಡುವರೆ ವರ್ಷದಿಂದ ಅವರಿಗೆ ಡಯಾಲಿಸಿಸ್ ಮಾಡಿಸಲಾಗುತ್ತಿತ್ತಂತೆ. ಶನಿವಾರ ಡಯಾಲಿಸಿಸ್ಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮರಿಯಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾರೆ.ಅವರನ್ನು ರಕ್ಷಣೆ ಮಾಡಲು ಮಗ ಹೋದಾಗ ಇಬ್ಬರೂ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ’ ಎಂದು ತುಮಕೂರು ರೈಲ್ವೆ ಪೊಲೀಸ್ ಎಎಸ್ಐ ಶಿವಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.