<p>ಪ್ರಜಾವಾಣಿ ವಾರ್ತೆ</p>.<p><strong>ತುಮಕೂರು</strong>: ಜಿಲ್ಲೆಯ 1,32,332 ರೈತರ ಖಾತೆಗೆ ₹74 ಕೋಟಿ ಬರ ಪರಿಹಾರ ಹಣ ಜಮೆ ಮಾಡಲಾಗಿದೆ.</p>.<p>ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 15,975 ರೈತರಿಗೆ ₹9.28 ಕೋಟಿ, ಗುಬ್ಬಿಯ 8,234 ರೈತರಿಗೆ ₹4.10 ಕೋಟಿ, ಕೊರಟಗೆರೆಯ 12,144 ಜನರಿಗೆ ₹7.28 ಲಕ್ಷ, ಕುಣಿಗಲ್ನ 19,022 ಮಂದಿಗೆ ₹9.64 ಲಕ್ಷ, ಮಧುಗಿರಿಯ 15,548 ರೈತರಿಗೆ ₹8.97 ಕೋಟಿ, ಪಾವಗಡದ 5,641 ರೈತರಿಗೆ ₹4.25 ಕೋಟಿ, ಶಿರಾದ 17,013 ರೈತರಿಗೆ ₹11.19 ಲಕ್ಷ, ತಿಪಟೂರಿನ 14,955 ರೈತರಿಗೆ ₹7.78 ಕೋಟಿ, ತುಮಕೂರಿನ 11,004 ರೈತರಿಗೆ ₹5.20 ಕೋಟಿ ಹಾಗೂ ತುರುವೇಕೆರೆಯ 12,796 ರೈತರಿಗೆ ₹6.48 ಕೋಟಿ ಸೇರಿದಂತೆ 1,32,332 ರೈತರಿಗೆ 74.21 ಕೋಟಿ ಬರ ಪರಿಹಾರ ವಿತರಿಸಲಾಗಿದೆ.</p>.<p>ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳ ಜತೆ ಸಭೆ ನಡೆಸಿ ಈ ಮಾಹಿತಿ ಹಂಚಿಕೊಂಡರು.</p>.<p>‘ಪರಿಹಾರದ ಹಣ ಬಾರದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಜಿಲ್ಲೆಯ 18 ಮೇವು ಬ್ಯಾಂಕ್ಗಳಲ್ಲಿ ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಅಹವಾಲು ಆಲಿಸಲು ಸಹಾಯವಾಣಿ ಕೇಂದ್ರ ತೆರೆಯಬೇಕು’ ಎಂದು ಸೂಚಿಸಿದರು.</p>.<p>ಆಶ್ರಯ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು 1,728 ಎಕರೆ ಜಮೀನು ಗುರುತಿಸಿ ಮಂಜೂರಾತಿ ಆದೇಶ ನೀಡಲಾಗಿದೆ. 1,199 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p><strong>ತುಮಕೂರು</strong>: ಜಿಲ್ಲೆಯ 1,32,332 ರೈತರ ಖಾತೆಗೆ ₹74 ಕೋಟಿ ಬರ ಪರಿಹಾರ ಹಣ ಜಮೆ ಮಾಡಲಾಗಿದೆ.</p>.<p>ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 15,975 ರೈತರಿಗೆ ₹9.28 ಕೋಟಿ, ಗುಬ್ಬಿಯ 8,234 ರೈತರಿಗೆ ₹4.10 ಕೋಟಿ, ಕೊರಟಗೆರೆಯ 12,144 ಜನರಿಗೆ ₹7.28 ಲಕ್ಷ, ಕುಣಿಗಲ್ನ 19,022 ಮಂದಿಗೆ ₹9.64 ಲಕ್ಷ, ಮಧುಗಿರಿಯ 15,548 ರೈತರಿಗೆ ₹8.97 ಕೋಟಿ, ಪಾವಗಡದ 5,641 ರೈತರಿಗೆ ₹4.25 ಕೋಟಿ, ಶಿರಾದ 17,013 ರೈತರಿಗೆ ₹11.19 ಲಕ್ಷ, ತಿಪಟೂರಿನ 14,955 ರೈತರಿಗೆ ₹7.78 ಕೋಟಿ, ತುಮಕೂರಿನ 11,004 ರೈತರಿಗೆ ₹5.20 ಕೋಟಿ ಹಾಗೂ ತುರುವೇಕೆರೆಯ 12,796 ರೈತರಿಗೆ ₹6.48 ಕೋಟಿ ಸೇರಿದಂತೆ 1,32,332 ರೈತರಿಗೆ 74.21 ಕೋಟಿ ಬರ ಪರಿಹಾರ ವಿತರಿಸಲಾಗಿದೆ.</p>.<p>ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳ ಜತೆ ಸಭೆ ನಡೆಸಿ ಈ ಮಾಹಿತಿ ಹಂಚಿಕೊಂಡರು.</p>.<p>‘ಪರಿಹಾರದ ಹಣ ಬಾರದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು. ಜಿಲ್ಲೆಯ 18 ಮೇವು ಬ್ಯಾಂಕ್ಗಳಲ್ಲಿ ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಅಹವಾಲು ಆಲಿಸಲು ಸಹಾಯವಾಣಿ ಕೇಂದ್ರ ತೆರೆಯಬೇಕು’ ಎಂದು ಸೂಚಿಸಿದರು.</p>.<p>ಆಶ್ರಯ ವಸತಿ ಯೋಜನೆಯಡಿ ನಿವೇಶನ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು 1,728 ಎಕರೆ ಜಮೀನು ಗುರುತಿಸಿ ಮಂಜೂರಾತಿ ಆದೇಶ ನೀಡಲಾಗಿದೆ. 1,199 ಎಕರೆ ಪ್ರದೇಶವನ್ನು ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>