ತಾಲ್ಲೂಕಿನಲ್ಲಿ ಮುಸಕಿನಜೋಳ ಅತಿ ಹೆಚ್ಚು ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಮುಸುಕಿನ ಜೋಳ, ತೊಗರಿಕಾಳು ಬಿತ್ತನೆ ಬೀಜದ ಕೊರತೆ ಇದೆ. ತಾಲ್ಲೂಕಿನ 5 ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಈಗಾಗಲೇ 632 ಕ್ವಿಂಟಲ್ ಶೇಂಗಾ, 248 ಕ್ವಿಂಟಲ್ ಮುಸುಕಿನ ಜೋಳ, 121 ಕ್ವಿಂಟಲ್ ರಾಗಿ, 23 ಕ್ವಿಂಟಲ್ ತೊಗರಿ, 8 ಕ್ವಿಂಟಲ್ ಭತ್ತ ಸರಬರಾಜು ಮಾಡಲಾಗಿದೆ. ಈವರೆಗೆ ಸುಮಾರು 700ರಿಂದ 750 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ.