<p><strong>ಶಿರಾ</strong>: ಹಣ ಪಡೆದು ನಕಲಿ ಇ-ಸ್ವತ್ತು ಮಾಡಿಕೊಟ್ಟಿದ್ದ ಆರೋಪದಲ್ಲಿ ನಗರಸಭೆ ಸಿಬ್ಬಂದಿ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ನ ಮಹಮದ್ ಶಾದಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಾಜಿ, ಅನಿಲ್ ಕುಮಾರ್ ಅವರನ್ನು ಕರ ವಸೂಲಿಗಾರ ಕೆಲಸಕ್ಕೆ ನಿಯೋಜಿಸಲಾಗಿದ್ದು, ನಕಲಿ ಇ– ಸ್ವತ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.</p>.<p>ನಗರದ ನಿವಾಸಿಗಳಾದ ನಾಗರಾಜು, ಸುಮ, ಅಬ್ದುಲ್ ಖುರೇಶಿ ಅವರು ಇ-ಖಾತಾ ನವೀಕರಣಕ್ಕಾಗಿ ಶಿರಾ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಲಗತ್ತಿಸಿದ್ದ ಇ-ಖಾತೆ ಪ್ರತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಇ-ಆಸ್ತಿ, ತಂತ್ರಾಂಶದಲ್ಲಿ ದಾಖಲಾಗದೆ ಇರುವುದು ಕಂಡು ಬಂದ ಮೇರೆಗೆ ನಗರಸಭೆ ಕಂದಾಯ ಅಧಿಕಾರಿ ಎಚ್.ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು.</p>.<p>ನಗರಸಭೆ ನೌಕರರಾದ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ ಮಹಮದ್ ಶಾದಾಬ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಸ್ವತ್ತಿನ ಮಾಲೀಕರನ್ನು ಸಂಪರ್ಕಿಸಿ ಕಂದಾಯ ತೆರಿಗೆ ಪಾವತಿಸಬೇಕು ಎಂದು ಸ್ವತ್ತಿನ ಮಾಲೀಕರಿಗೆ ನಂಬಿಸಿ ತಲಾ ₹30 ಸಾವಿರ ಪಡೆದು ಬೇರೊಬ್ಬರ ಮೂಲ ಇ-ಸ್ವತ್ತಿನ ಪ್ರತಿಯಲ್ಲಿನ ಮಾಹಿತಿಯನ್ನು ಎಡಿಟ್ ಮಾಡಿ ನಕಲಿ ಇ-ಸ್ವತ್ತು ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿರುವುದು ತಿಳಿದು ಬಂದಿದೆ.</p>.<p>ಎಸ್.ಪಿ. ಅಶೋಕ್ ಕೆ.ವಿ, ಹೆಚ್ಚುವರಿ ಎಸ್.ಪಿ. ಗೋಪಾಲ್, ಪುರುಷೋತ್ತಮ್ ನಿರ್ದೇಶನದಲ್ಲಿ ಡಿವೈಎಸ್ ಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು. ಶಿರಾ ನಗರ ಠಾಣೆ ಸಿಪಿಐ ಮಂಜೇಗೌಡ, ಪಿಎಸ್ಐ ರೇಣುಕಾ ಯಾದವ್, ಎಎಸ್ಐ ಮಹಾಲಿಂಗಯ್ಯ ಹಾಗೂ ತನಿಖಾ ಸಹಾಯಕರಾಗಿ ರಂಗನಾಥಪ್ಪ ತಂಡದಲ್ಲಿ ಇದ್ದರು.</p>.<p>ಆರೋಪಿಗಳಿಂದ ಲ್ಯಾಪ್ಟಾಪ್, ಪ್ರಿಂಟರ್, ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ</strong>: ಹಣ ಪಡೆದು ನಕಲಿ ಇ-ಸ್ವತ್ತು ಮಾಡಿಕೊಟ್ಟಿದ್ದ ಆರೋಪದಲ್ಲಿ ನಗರಸಭೆ ಸಿಬ್ಬಂದಿ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ನ ಮಹಮದ್ ಶಾದಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ನಗರಸಭೆಯಲ್ಲಿ ನೀರು ಸರಬರಾಜು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾಲಾಜಿ, ಅನಿಲ್ ಕುಮಾರ್ ಅವರನ್ನು ಕರ ವಸೂಲಿಗಾರ ಕೆಲಸಕ್ಕೆ ನಿಯೋಜಿಸಲಾಗಿದ್ದು, ನಕಲಿ ಇ– ಸ್ವತ್ತು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.</p>.<p>ನಗರದ ನಿವಾಸಿಗಳಾದ ನಾಗರಾಜು, ಸುಮ, ಅಬ್ದುಲ್ ಖುರೇಶಿ ಅವರು ಇ-ಖಾತಾ ನವೀಕರಣಕ್ಕಾಗಿ ಶಿರಾ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಲಗತ್ತಿಸಿದ್ದ ಇ-ಖಾತೆ ಪ್ರತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಇ-ಆಸ್ತಿ, ತಂತ್ರಾಂಶದಲ್ಲಿ ದಾಖಲಾಗದೆ ಇರುವುದು ಕಂಡು ಬಂದ ಮೇರೆಗೆ ನಗರಸಭೆ ಕಂದಾಯ ಅಧಿಕಾರಿ ಎಚ್.ಮಂಜುನಾಥ್ ಪೊಲೀಸರಿಗೆ ದೂರು ನೀಡಿದ್ದರು.</p>.<p>ನಗರಸಭೆ ನೌಕರರಾದ ಆರ್.ಬಾಲಾಜಿ, ಅನಿಲ್ ಕುಮಾರ್ ಹಾಗೂ ಸೈಬರ್ ಸೆಂಟರ್ ಮಹಮದ್ ಶಾದಾಬ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಸ್ವತ್ತಿನ ಮಾಲೀಕರನ್ನು ಸಂಪರ್ಕಿಸಿ ಕಂದಾಯ ತೆರಿಗೆ ಪಾವತಿಸಬೇಕು ಎಂದು ಸ್ವತ್ತಿನ ಮಾಲೀಕರಿಗೆ ನಂಬಿಸಿ ತಲಾ ₹30 ಸಾವಿರ ಪಡೆದು ಬೇರೊಬ್ಬರ ಮೂಲ ಇ-ಸ್ವತ್ತಿನ ಪ್ರತಿಯಲ್ಲಿನ ಮಾಹಿತಿಯನ್ನು ಎಡಿಟ್ ಮಾಡಿ ನಕಲಿ ಇ-ಸ್ವತ್ತು ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿರುವುದು ತಿಳಿದು ಬಂದಿದೆ.</p>.<p>ಎಸ್.ಪಿ. ಅಶೋಕ್ ಕೆ.ವಿ, ಹೆಚ್ಚುವರಿ ಎಸ್.ಪಿ. ಗೋಪಾಲ್, ಪುರುಷೋತ್ತಮ್ ನಿರ್ದೇಶನದಲ್ಲಿ ಡಿವೈಎಸ್ ಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿದ್ದರು. ಶಿರಾ ನಗರ ಠಾಣೆ ಸಿಪಿಐ ಮಂಜೇಗೌಡ, ಪಿಎಸ್ಐ ರೇಣುಕಾ ಯಾದವ್, ಎಎಸ್ಐ ಮಹಾಲಿಂಗಯ್ಯ ಹಾಗೂ ತನಿಖಾ ಸಹಾಯಕರಾಗಿ ರಂಗನಾಥಪ್ಪ ತಂಡದಲ್ಲಿ ಇದ್ದರು.</p>.<p>ಆರೋಪಿಗಳಿಂದ ಲ್ಯಾಪ್ಟಾಪ್, ಪ್ರಿಂಟರ್, ಎರಡು ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>