‘ಕಡಿದು ಹಾಕಿದ್ದ ತೆಂಗಿನ ಗಿಡದ ತುಂಡುಗಳನ್ನೇ ಬಳಸಿಕೊಂಡು ಆಸನಗಳನ್ನಾಗಿ ರೂಪಿಸಲಾಗಿದೆ. ಇವುಗಳಿಗೆ ಹಳದಿ, ತಿಳಿ ಗುಲಾಬಿ ಬಣ್ಣ ಹಚ್ಚಿ ಅಂದಗಾಣಿಸಲಾಗಿದೆ. ಅಲ್ಲದೇ ಹೂ ಕುಂಡ, ಅಲಂಕಾರಿಕ ಗಿಡಗಳ ಕುಂಡಗಳನ್ನು ಇಡಲಾಗುತ್ತಿದೆ. ಆವರಣದಲ್ಲಿ ಹುಲ್ಲು ಬೆಳೆಸಿ ಲಾನ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ನೈರ್ಮಲ್ಯ ವಿಭಾಗದ ಎಂಜಿನಿಯರ್ ಮೃತ್ಯಂಜಯ್ ಮಾಹಿತಿ ನೀಡಿದರು.