ನಗರದ ಎಪಿಎಂಸಿ ರೈತ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೊಬ್ಬರಿ ಬೆಲೆ ಬಾರಿ ಕುಸಿತ ಕಂಡ ನಾಲ್ಕು ತಿಂಗಳ ನಂತರ ನಾಫೆಡ್ ಮೂಲಕ ಮೂಲ ಬೆಲೆಗೆ ಖರೀದಿಸಿಲು ಮುಂದಾಗಿದೆ. ರಾಜ್ಯ ಸಕಾರವು ಇದಕ್ಕೆ ಪ್ರೋತ್ಸಾಹಧನ ನೀಡುವ ಭರವಸೆ ನೀಡಿದ್ದರೂ, ಖರೀದಿಸಿಲ್ಲ. ರೈತ ಪರ ಎಂದು ಹೇಳುವ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಬಾರದಿರುವುದು ನೋವು ಉಂಟು ಮಾಡಿದೆ’ ಎಂದರು.