ಬುಕ್ಕಾಪಟ್ಟಣ ಅರಣ್ಯ ಪ್ರದೇಶಕ್ಕೆ ಸೇರಿದ ಸಂತೆಕಣಿವೆ ಕೆರೆ, ರಾಮಪ್ಪನ ಕೆರೆಗಳಿಗೆ ನೀರು ಬಂದಿದೆ. ನುಲೇನೂರು ಹಾಗೂ ರಂಗನಕೆರೆ ಭಾಗದಲ್ಲಿ ಉತ್ತಮ ಮಳೆಯಾಗಿ ರೈತರ ಹೊಲಗಳಲ್ಲಿ ನಿರ್ಮಿಸಿರುವ ಏರಿ- ಬದುಗಳು ಕೊಚ್ಚಿಹೋಗಿವೆ. ಸೋಮನಹಳ್ಳಿ ಗ್ರಾಮದಲ್ಲಿ ಜೋರು ಮಳೆಗೆ ಚರಂಡಿ ಕಟ್ಟಿ, ಹಲವು ಮನೆಗಳಿಗೆ ನೀರು ನುಗ್ಗಿದೆ.