ತುಮಕೂರು: ಹೆಬ್ಬೂರು ಠಾಣೆ ವ್ಯಾಪ್ತಿಯ ಹೇಮಾವತಿ ನಾಲಾ ವ್ಯಾಪ್ತಿಯಲ್ಲಿ ತುಮಕೂರು ತಹಶೀಲ್ದಾರ್ ಶನಿವಾರ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ ಬೆನ್ನಲ್ಲೆ ಭಾನುವಾರ ಬೆಳಿಗ್ಗೆ ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ರೈತರು ನಾಲೆಯ ತೂಬು ಕಿತ್ತು ನೀರು ಬಿಟ್ಟಿದ್ದಾರೆ.
ಗುಬ್ಬಿ ತಾಲ್ಲೂಕು ಸಿಎಸ್.ಪುರ ಹೋಬಳಿಯ ಕಣಕುಪ್ಪೆ ಬಳಿ ನಾಲಾ ತೂಬು ಕಳಚಿ ನೀರು ಬಿಟ್ಟಿದ್ದಾರೆ ಎನ್ನಲಾಗಿದೆ. ತೂಬು ಕಳಚುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.