‘ಮೇಲ್ಜಾತಿಯವರಿಗೆ ಸೇರಿದ ತೋಟದಲ್ಲಿ ಪರಿಶಿಷ್ಟ ಜಾತಿಯ ಶ್ರೀನಿವಾಸ್ ಅವರು ಬಾಳೆಗೊನೆ ಕಡಿದಿದ್ದಾರೆ ಎಂದು ಆಪಾದಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಶ್ರೀನಿವಾಸ್ ಅವರ ಅಣ್ಣ ವೆಂಕಟೇಶಪ್ಪ, ಅವರ ಹೆಂಡತಿ ಲಕ್ಷ್ಮೀದೇವಮ್ಮ ಹಾಗೂ ತಂದೆ ಗಂಗಯ್ಯ ಅವರ ಮೇಲೆ ಹಲ್ಲೆ ನಡೆಸಿ, ಗುಡಿಸಲಿಗೆ ಬೆಂಕಿ ಹಚ್ಚಲಾಗಿದೆ’ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.