‘ಸಂಸದರು ನಂದಿಹಳ್ಳಿಯಲ್ಲಿ ಚರ್ಚಿಸಿದ ವಿಚಾರವೇ ಬೇರೆ, ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ದಾಖಲೆಯೇ ಬೇರೆ. ಕೆಆರ್ಎಸ್ ಮಾದರಿ ಡ್ಯಾಂ ನಿರ್ಮಿಸಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಎಕರೆಗೆ ₹1 ಕೋಟಿ ಪರಿಹಾರ ನೀಡುವ ಬಗ್ಗೆ ಅವರು ಮಾತನಾಡುತ್ತಿದ್ದಾಗ ನಾನು ಆಕ್ಷೇಪಿಸಿ, ರೈತರಿಗೆ ಆ ಮಟ್ಟದ ಪರಿಹಾರ ದಕ್ಕದು ಎಂದು ಗೌರವಯುತವಾಗಿ ಹೇಳಿದ್ದೆ. ಆದರೆ ನನ್ನ ಮೇಲೆ ಹರಿಹಾಯ್ದ ಸಂಸದರು ಏಕವಚನ ಪ್ರಯೋಗಿಸಿದ್ದರು. ಜಟಾಪಟಿಗೆ ಯಾರು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಸ್ಪಷ್ಟಪಡಿಸಿದರು.