<p><strong>ಗುಬ್ಬಿ:</strong> ‘ನಾನು ಹೊಟ್ಟೆಪಾಡಿಗಾಗಿ ರಾಜಕೀಯಕ್ಕೆ ಬಂದಿಲ್ಲ. ಜನಸೇವೆಯ ಉದ್ದೇಶದಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯಕ್ಕೆ ಬರುವ ಮೊದಲೂ ಆದಾಯ ತೆರಿಗೆ ಪಾವತಿಸುತ್ತಿದ್ದೆ’ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.</p>.<p>ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟರ ಭೂಮಿ ಕಬಳಿಸಿದ ಸಂಸದ ಬಸವರಾಜು ಹಾಗೂ ಅವರ ಹಿಂಬಾಲಕ ಕುಂದರನಹಳ್ಳಿ ರಮೇಶ್ ರಾಜಕಾರಣವನ್ನೇ ಉದ್ಯೋಗ ಮಾಡಿಕೊಂಡು ಹೊಟ್ಟೆಪಾಡು ನಡೆಸುವ ಭೂಗಳ್ಳರು ಎಂದು ಆರೋಪಿಸಿದರು.</p>.<p>‘ಎಚ್ಎಎಲ್ ಮತ್ತು ಎಳನೀರು ಕಾರ್ಖಾನೆ ಹೆಸರಿನಲ್ಲಿ ಪರಿಶಿಷ್ಟರ ಭೂಮಿ ಕಬಳಿಸಿದ್ದಾರೆ. ಡೆವೆಲಪ್ಮೆಂಟ್ ರೆವ್ಯುಲ್ಯುಷೇನ್ ಫೋರಂ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಇಂತಹವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸಂಸದರು ನಂದಿಹಳ್ಳಿಯಲ್ಲಿ ಚರ್ಚಿಸಿದ ವಿಚಾರವೇ ಬೇರೆ, ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ದಾಖಲೆಯೇ ಬೇರೆ. ಕೆಆರ್ಎಸ್ ಮಾದರಿ ಡ್ಯಾಂ ನಿರ್ಮಿಸಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಎಕರೆಗೆ ₹1 ಕೋಟಿ ಪರಿಹಾರ ನೀಡುವ ಬಗ್ಗೆ ಅವರು ಮಾತನಾಡುತ್ತಿದ್ದಾಗ ನಾನು ಆಕ್ಷೇಪಿಸಿ, ರೈತರಿಗೆ ಆ ಮಟ್ಟದ ಪರಿಹಾರ ದಕ್ಕದು ಎಂದು ಗೌರವಯುತವಾಗಿ ಹೇಳಿದ್ದೆ. ಆದರೆ ನನ್ನ ಮೇಲೆ ಹರಿಹಾಯ್ದ ಸಂಸದರು ಏಕವಚನ ಪ್ರಯೋಗಿಸಿದ್ದರು. ಜಟಾಪಟಿಗೆ ಯಾರು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಸ್ಪಷ್ಟಪಡಿಸಿದರು.</p>.<p>‘ಸ್ವಜಾತಿಯ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸಂಸದರು, ಲಿಂಗಾಯತರ ಮನೆಗಳ ಮೇಲೆಯೇ ಕಲ್ಲು ಎಸೆದು ಗುಂಪು ರಾಜಕಾರಣ ಮಾಡುತ್ತಿದ್ದಾರೆ. ನಾನು ಶಾಸಕನಾದ ಬಳಿಕ ಗುಂಪು ಮತ್ತು ದ್ವೇಷ ರಾಜಕಾರಣಕ್ಕೆ ಆಸ್ಪದ ನೀಡಿಲ್ಲ’ ಎಂದು ಹೇಳಿದರು.</p>.<p>‘ಇಲ್ಲಸಲ್ಲದ ಯೋಜನೆ ಹೆಸರು ಹೇಳಿ ಚುನಾವಣೆ ನಡೆಸುವ ಸಂಸದರ ಮಾತು ಕೇಳಿ ಭೂಮಿ ಕಳೆದುಕೊಂಡ ಬಡ ರೈತರು ಕೋಟಿ ರೂಪಾಯಿ ಪರಿಹಾರಕ್ಕೆ ನನ್ನ ಮನೆ ಬಳಿ ಬರುತ್ತಾರೆ. ಈ ಬಗೆಯ ಸುಳ್ಳು ಭರವಸೆ ವಿಚಾರಕ್ಕೆ ವಿರೋಧ ಮಾಡಿದ್ದೆ. ರೈತರಿಗೆ ಸಲ್ಲದ ಆಸೆ ತೋರಿಸುವುದು ತರವಲ್ಲ. ಮಂಕುಬೂದಿ ಎರಚುವ ಕಾಯಕ ಅವರಿಗೆ ಕರಗತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ:</strong> ‘ನಾನು ಹೊಟ್ಟೆಪಾಡಿಗಾಗಿ ರಾಜಕೀಯಕ್ಕೆ ಬಂದಿಲ್ಲ. ಜನಸೇವೆಯ ಉದ್ದೇಶದಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯಕ್ಕೆ ಬರುವ ಮೊದಲೂ ಆದಾಯ ತೆರಿಗೆ ಪಾವತಿಸುತ್ತಿದ್ದೆ’ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.</p>.<p>ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟರ ಭೂಮಿ ಕಬಳಿಸಿದ ಸಂಸದ ಬಸವರಾಜು ಹಾಗೂ ಅವರ ಹಿಂಬಾಲಕ ಕುಂದರನಹಳ್ಳಿ ರಮೇಶ್ ರಾಜಕಾರಣವನ್ನೇ ಉದ್ಯೋಗ ಮಾಡಿಕೊಂಡು ಹೊಟ್ಟೆಪಾಡು ನಡೆಸುವ ಭೂಗಳ್ಳರು ಎಂದು ಆರೋಪಿಸಿದರು.</p>.<p>‘ಎಚ್ಎಎಲ್ ಮತ್ತು ಎಳನೀರು ಕಾರ್ಖಾನೆ ಹೆಸರಿನಲ್ಲಿ ಪರಿಶಿಷ್ಟರ ಭೂಮಿ ಕಬಳಿಸಿದ್ದಾರೆ. ಡೆವೆಲಪ್ಮೆಂಟ್ ರೆವ್ಯುಲ್ಯುಷೇನ್ ಫೋರಂ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಇಂತಹವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಸಂಸದರು ನಂದಿಹಳ್ಳಿಯಲ್ಲಿ ಚರ್ಚಿಸಿದ ವಿಚಾರವೇ ಬೇರೆ, ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ದಾಖಲೆಯೇ ಬೇರೆ. ಕೆಆರ್ಎಸ್ ಮಾದರಿ ಡ್ಯಾಂ ನಿರ್ಮಿಸಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಎಕರೆಗೆ ₹1 ಕೋಟಿ ಪರಿಹಾರ ನೀಡುವ ಬಗ್ಗೆ ಅವರು ಮಾತನಾಡುತ್ತಿದ್ದಾಗ ನಾನು ಆಕ್ಷೇಪಿಸಿ, ರೈತರಿಗೆ ಆ ಮಟ್ಟದ ಪರಿಹಾರ ದಕ್ಕದು ಎಂದು ಗೌರವಯುತವಾಗಿ ಹೇಳಿದ್ದೆ. ಆದರೆ ನನ್ನ ಮೇಲೆ ಹರಿಹಾಯ್ದ ಸಂಸದರು ಏಕವಚನ ಪ್ರಯೋಗಿಸಿದ್ದರು. ಜಟಾಪಟಿಗೆ ಯಾರು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಸ್ಪಷ್ಟಪಡಿಸಿದರು.</p>.<p>‘ಸ್ವಜಾತಿಯ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸಂಸದರು, ಲಿಂಗಾಯತರ ಮನೆಗಳ ಮೇಲೆಯೇ ಕಲ್ಲು ಎಸೆದು ಗುಂಪು ರಾಜಕಾರಣ ಮಾಡುತ್ತಿದ್ದಾರೆ. ನಾನು ಶಾಸಕನಾದ ಬಳಿಕ ಗುಂಪು ಮತ್ತು ದ್ವೇಷ ರಾಜಕಾರಣಕ್ಕೆ ಆಸ್ಪದ ನೀಡಿಲ್ಲ’ ಎಂದು ಹೇಳಿದರು.</p>.<p>‘ಇಲ್ಲಸಲ್ಲದ ಯೋಜನೆ ಹೆಸರು ಹೇಳಿ ಚುನಾವಣೆ ನಡೆಸುವ ಸಂಸದರ ಮಾತು ಕೇಳಿ ಭೂಮಿ ಕಳೆದುಕೊಂಡ ಬಡ ರೈತರು ಕೋಟಿ ರೂಪಾಯಿ ಪರಿಹಾರಕ್ಕೆ ನನ್ನ ಮನೆ ಬಳಿ ಬರುತ್ತಾರೆ. ಈ ಬಗೆಯ ಸುಳ್ಳು ಭರವಸೆ ವಿಚಾರಕ್ಕೆ ವಿರೋಧ ಮಾಡಿದ್ದೆ. ರೈತರಿಗೆ ಸಲ್ಲದ ಆಸೆ ತೋರಿಸುವುದು ತರವಲ್ಲ. ಮಂಕುಬೂದಿ ಎರಚುವ ಕಾಯಕ ಅವರಿಗೆ ಕರಗತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>