ಪಾಳೇಗಾರರ ಕಾಲದಲ್ಲಿ ರಾಜಧಾನಿಯಾಗಿದ್ದ ಹಾಗಲವಾಡಿಯಲ್ಲಿ ಕೋಟೆ ಕೊತ್ತಲಗಳು, ದೇವಾಲಯ, ಕಲ್ಯಾಣಿ, ಶಾಸನಗಳಿವೆ. ಈ ಹಿಂದೆ ಸಿಕ್ಕಿದ್ದ ಹೊಯ್ಸಳರ ಕಾಲದ ಜನಾರ್ದನ ಮೂರ್ತಿಯನ್ನು ಸಂರಕ್ಷಿಸಲಾಗಿದೆ. ಈಗ ಸಿಕ್ಕಿರುವ ಹನುಮನ ಮೂರ್ತಿಯನ್ನು ಸಂರಕ್ಷಿಸಬೇಕಿದೆ. ಇಲ್ಲಿ ಇನ್ನೂ ಹೆಚ್ಚಿನ ಪ್ರಾಚ್ಯ ಅವಶೇಷ ಸಿಗುವ ಸಾಧ್ಯತೆಯಿದ್ದು, ಪುರಾತತ್ವ ಇಲಾಖೆ ಗಮನ ಹರಿಸಬೇಕು ಎಂದು ಅಮ್ಮನಘಟ್ಟ ಶ್ರೀನಿವಾಸ್ ಹೇಳಿದರು.