ಹತ್ತು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ಹಳೇ ಹೆದ್ದಾರಿಯಲ್ಲಿ ಸಾಲುಮರಗಳಿದ್ದವು. ಈ ಪೈಕಿ ರಸ್ತೆ ಅಭಿವೃದ್ಧಿಯ ನೆಪದಲ್ಲಿ 115 ಮರಗಳನ್ನು ತೆರವು ಮಾಡುವ ನಿರ್ಣಯ ಕೈಗೊಂಡಿದ್ದರೂ, ಅರಣ್ಯ ಇಲಾಖೆಯವರು 65 ಮರಗಳನ್ನು ತೆರವುಗೊಳಿಸಲು ಸೂಚಿಸಿದ್ದರು. ಉಳಿದಂತೆ ರಸ್ತೆಬದಿಯ ಅಂಗಡಿಗಳ ಮಾಲೀಕರು ತಮ್ಮ ಮಳಿಗೆಗಳು ಕಾಣುವುದಿಲ್ಲ ಎಂಬ ಕಾರಣಕ್ಕೆ ನಾನಾ ಕಾರಣಗಳನ್ನು ನೀಡಿ ಸುಮಾರು 60ಕ್ಕೂ ಹೆಚ್ಚು ಮರಗಳನ್ನು ಇಲಾಖೆಯ ಅಪ್ಪಣೆ ಪಡದೇ ಉರುಳಿಸಿದ್ದಾರೆ. ಇನ್ನೂ ಕೆಲವರು ರಾತ್ರೋರಾತ್ರಿ ಮರಗಳನ್ನು ಉರುಳಿಸಿದ ಉದಾಹರಣೆಗಳು ಇವೆ. ಬಸ್ ನಿಲ್ದಾಣದಲ್ಲಿದ್ದ ಮರಗಳನ್ನು ಕಡಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ ಎನ್ನುತ್ತಾರೆ ವ್ಯಾಪಾರಿ ಉದಯರವಿ.